Saturday, June 28, 2025
spot_imgspot_img
spot_imgspot_img

ಸುಳ್ಯ: ಲಂಚ ಸ್ವೀಕರಿಸುತ್ತಿದ್ದಾಗ ಗ್ರಾಮಕರಣಿಕರೋರ್ವರು ಲೋಕಾಯುಕ್ತ ಬಲೆಗೆ

- Advertisement -
- Advertisement -

ಸುಳ್ಯ: ಲಂಚ ಸ್ವೀಕರಿಸುತ್ತಿದ್ದಾಗ ಗ್ರಾಮಕರಣಿಕರೋರ್ವರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ಸುಳ್ಯ ತಾಲೂಕಿನ ಅರಂತೋಡಿನ ಗ್ರಾಮಕರಣಿಕ ಮೀಯಾಸಾಬ್ ಮುಲ್ಲ ಲೋಕಾಯುಕ್ತ ಬಲೆಗೆ ಬಿದ್ದ ಸಿಬ್ಬಂದಿಯಾಗಿದ್ದಾನೆ. ಖಾತೆ ಬದಲಾವಣೆಗೆ ಎನ್.ಒ.ಸಿ ನೀಡಲು ಲಂಚ ಪಡೆದುಕೊಂಡಾಗ ಆರೋಪಿ ರೆಡ್‌ಹ್ಯಾಂಡ್ ಆಗಿ‌ ಸಿಕ್ಕಿ ಬಿದ್ದಿದ್ದಾನೆ. ಅರಂತೋಡು ನಿವಾಸಿ ಹರಿಪ್ರಸಾದ್ ಎಂಬವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದು, 8 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಮೀಯಾಸಾಬ್ ಮೊದಲ ಕಂತಿನಲ್ಲಿ‌ 3 ಸಾವಿರ ರೂಪಾಯಿ ಪಡೆದಿದ್ದ.

ಇಂದು‌ ಬಾಕಿ ಉಳಿದ‌ 8 ಸಾವಿರ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿದಾಗ ಆರೋಪಿಯಿಂದ ಲಂಚದ 5 ಸಾವಿರ ರೂಪಾಯಿ ಪತ್ತೆಯಾಗಿದೆ.

Insta: glacharyajewellers
Fb: glacharya
- Advertisement -

Related news

error: Content is protected !!