Wednesday, April 24, 2024
spot_imgspot_img
spot_imgspot_img

ಅಕ್ರಮ ಟಿಡಿಆರ್ ಪ್ರಕರಣ: ಏಕಕಾಲದಲ್ಲಿ 4 ಕಡೆ ಎಸಿಬಿ ದಾಳಿ

- Advertisement -G L Acharya panikkar
- Advertisement -

ಬೆಂಗಳೂರು: ಅಕ್ರಮ ಟಿಡಿಆರ್ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಏಕಕಾಲದಲ್ಲಿ 4 ಕಡೆ ಎಸಿಬಿ ತಂಡ ದಾಳಿ ನಡೆಸಿದೆ. ಅಕ್ರಮ ಟಿಡಿಆರ್ ಹಗರಣ ಸಂಬಂಧ ಬಿಬಿಎಂಪಿ ಇಂಜಿನಿಯರ್ ಹಾಗೂ ಬ್ರೋಕರ್ ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಬಿ.ನಾಗರಾಜ್,ಕೆ.ಪಿ.ನಾಗೇಶ್,ಸುಬ್ಬರಾಜ್ ಹಾಗೂ ಎಂ.ಎನ್ ದೇವರಾಜ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಅಕ್ರಮ ಟಿಡಿಆರ್ ಸೃಷ್ಟಿ ಮಾಡಿ ಕೋಟ್ಯಾಂತರ ರೂಪಾಯಿಗೆ ಬಿಲ್ಡರ್ ಗಳಿಗೆ ಮಾರಾಟ ಮಾಡಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಬಿಬಿಎಂಪಿ ಇಂಜಿನಿಯರ್ ಹಾಗೂ ಬ್ರೋಕರ್ ಗಳ ವಿರುದ್ಧ ಕೇಸ್ ದಾಖಲಾಗಿತ್ತು. ಹೀಗಾಗಿ ಇಂದು ಎಸಿಬಿ ಇಸ್ಪಿ ಕಲಾಕೃಷ್ಣ ಸ್ವಾಮಿ ನೇತೃತ್ವದ ತಂಡ ಏಕಕಾಲದಲ್ಲಿ 4 ಕಡೆ ದಾಳಿ ನಡೆಸಿದೆ.

- Advertisement -

Related news

error: Content is protected !!