


ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ ವಿಟ್ಲ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ ಇದರ ಸಾರಥ್ಯದಲ್ಲಿ ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಧರ್ಮ ಜಾಗೃತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಮೇ 16 ರಂದು ನಡೆಯುವ ಅರ್ಧ ಏಕಾಹ ಭಜನೆ ಹಾಗೂ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆಯ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಉದ್ಯಮಿಗಳಾದ ದಿನೇಶ್ ಮಾಡ್ತೇಲು, ಯಶವಂತ ನಿಡ್ಯ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ, ಕೃಷ್ಣಯ್ಯ ಕೆ ವಿಟ್ಲ, ಮಹೇಂದ್ರ ವರ್ಮ, ಉಮೇಶ್ ಕೋಡಿಬೈಲು, ರವಿಕುಮಾರ್ ರೈ ಮಠ, ಅಶೋಕ್ ಕುಮಾರ್ ಶೆಟ್ಟಿ, ರಘುರಾಮ ರೈ, ಕಾನ ಈಶ್ವರ ಭಟ್, ಸುಬ್ರಹ್ಮಣ್ಯ ಭಟ್ ಸೇರಾಜೆ, ಭಾಸ್ಕರ ಮಡಿಯಾಲ, ಜಯರಾಮ ಬಲ್ಲಾಳ್,ಶ್ರೀ ಕೃಷ್ಣ ಕೇಪು, ರವಿಶಂಕರ್ ವಿಟ್ಲ, ಮೋಹನ್ ಸೇರಾಜೆ, ಶ್ರೀ ಕೃಷ್ಣ ವಿಟ್ಲ, ಹರೀಶ್ ಪೂಜಾರಿ ಮರುವಾಳ, ಅನಂತ ಪ್ರಸಾದ್ ವಿ, ನರ್ಸಪ್ಪ ಪೂಜಾರಿ, ಉದಯ ಆಲಂಗಾರು, ವಿನೋದ್ ಕೂಡೂರು, ನಿತಿನ್ ಬೊಡ್ಡೋಣಿ, ರಾಜು ಶೆಟ್ಟಿ, ರೂಪೇಶ್ ಪುತ್ತೂರು, ರಾಜೇಶ್ ಭಟ್ ಕುಂಡಡ್ಕ, ರಾಜೇಶ್ ಕರವೀರ, ಸದಾಶಿವ ಅಳಿಕೆ, ಅಜಿತ್ ಮಾಣಿಲ, ವಸಂತ ನಾಯಕ್ ಅಜೇರು, ಲೋಕೇಶ್ ಅಡ್ಡಾಳಿ, ಶರತ್ ಎನ್ಎಸ್, ಧನಂಜಯ ನೆಕ್ಕರೆಕಾಡು, ಯಶೋಧರ ಬಸವನಗುಡಿ, ರಾಜೇಶ್ ಗಾಳಿಹಿತ್ಲು, ನವೀನ್ ರಂಗರ ಮಜಲು, ಹರೀಶ್ ಕೆ ವಿಟ್ಲ, ಅಭಿಷೇಕ್ ಬಲ್ಲಾಳ್,ನವೀನ್ ಜೋಗಿ, ನಾಗೇಶ್ ಆಚಾರ್ಯ, ಗಿರೀಶ್ ಹಡೀಲ್ ಸತ್ಯನಾರಾಯಣ ಅಡ್ಯನಡ್ಕ, ಜಯಂತ ಸೂರ್ಯ, ಅಭಿಷೇಕ್ ಗಾಣಿಗ, ಕೃಷ್ಣ ಮಿತ್ತೂರು, ವಿಶ್ವೇಶ್ವರ ಆಲಂಗಾರು, ಪೂಜಿತ್ ನಿಡ್ಯ ಉಪಸ್ಥಿತರಿದ್ದರು








