ಆರೋಪಿ ಸೆಂಟ್ ಅಶ್ರಫ್ನಿಂದ ಮೋಸಹೋದ ಬಡಪಾಯಿಯ ಆಡಿಯೋ ವೈರಲ್


ವಿಟ್ಲ: ಒಂಟಿ ಮಹಿಳೆ ಇದ್ದ ಮನೆಗೆ ಕರೆಂಟ್ ಬಿಲ್ ಕೊಡುವ ನೆಪದಲ್ಲಿ ನುಗ್ಗಿ ದರೋಡೆಯ ನಾಟಕವಾಡಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವಿಟ್ಲದ ಅಡ್ಡದ ಬೀದಿಯಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಲೈಮಾನ್ ಅವರ ಪತ್ನಿ ಭೀಫಾತುಮ್ಮ ಗಂಭೀರ ಗಾಯಗೊಂಡಿದ್ದರು. ವಿಟ್ಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.
ಆರೋಪಿ ವಿಟ್ಲ ಮೂಲದ ಮೊಹಮ್ಮದ್ ಅಶ್ರಫ್ ಯಾನೆ ಸೆಂಟ್ ಅಶ್ರಫ್ ಕ್ರಿಮಿನಲ್ ಬ್ಯಾಗ್ರೌಂಡ್ ಕೇಳಿದ್ರೆ ನೀವೇ ಶಾಕ್ ಆಗ್ತೀರ..
ಮೊಹಮ್ಮದ್ ಅಶ್ರಫ್ ಯಾನೆ ಸೆಂಟ್ ಅಶ್ರಫ್ ಹಲವಾರು ಕ್ರಿಮಿನಲ್ ಕೇಸ್ನಲ್ಲಿ ಹಾಗೂ ಹಣ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿ, ದರೋಡೆಯ ನಾಟಕವಾಡಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಆರೋಪಿಗಳ ಪೈಕಿ ಪ್ರಮುಖ ಆರೋಪಿಯಾಗಿದ್ದ ಮೊಹಮ್ಮದ್ ಅಶ್ರಫ್ ಯಾನೆ ಸೆಂಟ್ ಅಶ್ರಫ್ ಕೊಚ್ಚಿ ಮೂಲಕ ಅರಬ್ ರಾಷ್ಟ್ರಕ್ಕೆ ಪರಾರಿಯಾಗಿದ್ದ.
ಅರಬ್ ರಾಷ್ಟ್ರದಲ್ಲೂ ಈತನ ಚಾಳಿ ಬುದ್ದಿ ಬಿಡದ ಈತ, ನಾಯಿ ಬಾಲ ಡೊಂಕೆ ಎನ್ನುವಂತೆ ಅಲ್ಲೂ ಮಾಡಿದ್ದು ಇದೇ ಘನಂದಾರಿಕೆಯ ಕೆಲಸ. ಏನು ಅಂತೀರಾ ಇಲ್ಲಿದೆ ಸ್ಟೋರಿ.

ವಿದೇಶಕ್ಕೆ ತೆರಳಿದ ಈತ ಅಲ್ಲೊಂದು ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ಅಲ್ಲಿ ಕೇರಳ ಮೂಲದ ಯುವಕನ ಜೊತೆ ನಂಟು ಬೆಳೆಸಿಕೊಂಡ ಈತ ಸ್ಪಲ್ಪ ದಿನದ ಮಟ್ಟಿಗೆ ಸ್ಟೇ ಆಗಲು ರೂಮ್ ಹಂಚಿಕೊಳ್ಳುವ ಎಂದು ಕೇಳಿಕೊಂಡಿದ್ದ. ತನ್ನವರೆನ್ನುವ ಅಭಿಮಾನ, ನಂಬಿಕೆಯ ಮೇರೆಗೆ ತನ್ನ ರೂಮ್ನಲ್ಲಿ ಇರಿಸಿಕೊಂಡ ಕೇರಳದ ಯುವಕನಿಗೆ ಈತ ಮಾಡಿದ್ದು ನಂಬಿಕೆ ದ್ರೋಹ.
ಕೇರಳದ ಯುವಕ ತನ್ನ ತಾಯ್ನಾಡಿಗೆ ಹಿಂತಿರುಗಲು ಸಿದ್ದವಾಗುತ್ತಿದ್ದ ವೇಳೆ ಸ್ನಾನಕ್ಕೆಂದು ತೆರಳಿದ್ದು, ಈ ವಿಷಯ ತಿಳಿದ ಈ ಖತರ್ನಾಕ್ ಅಶ್ರಫ್ ಆತ ದುಡಿದು ಸಂಪಾದಿಸಿ ತನ್ನ ಊರಿಗೆ ಕೊಂಡೊಯ್ಯಲು ಸೂಟ್ಕೇಸ್ ನಲ್ಲಿ ಇಟ್ಟಿದ್ದ ಲಕ್ಷಾಂತರ ಮೊತ್ತದ ಹಣ, ಚಿನ್ನಾಭರಣವನ್ನು ದೋಚಿ ಅಲ್ಲಿಂದಲೂ ಪರಾರಿಯಾಗಿದ್ದಾನೆ.
ಊರಿನಿಂದ ಬಂದವ ಎಂದು ಆಸರೆ ಕೊಟ್ಟಿದ್ದ ಕೇರಳ ಮೂಲದ ಬಡಪಾಯಿ ಹುಡುಗ ತನ್ನ ನೋವನ್ನು ಹಂಚಿಕೊಂಡ ಆಡಿಯೋ ಮತ್ತು ಸೆಂಟ್ ಅಶ್ರಫ್ನ ಐಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.