- Advertisement -
- Advertisement -



ಬಂಟ್ವಾಳ: ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯೋರ್ವವನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ.
ಮಧ್ಯ ಪ್ರದೇಶದ ಅಮರ್ ಸಿಂಗ್ ಯಾನೆ ಅಮ್ಜತ್ ಎಂಬಾತ ಬಂಧಿತ ಆರೋಪಿ.
ಬಂಟ್ವಾಳ ಪೇಟೆಯಲ್ಲಿರುವ ವಿ.ಎನ್.ಆರ್.ಗೋಲ್ಡ್ ಮಳಿಗೆಯಲ್ಲಿ 2012 ರಲ್ಲಿ ಕಳ್ಳತನ ನಡೆಸಿ ಆರೋಪಿಯಾಗಿದ್ದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಮಧ್ಯ ಪ್ರದೇಶ ದ ಭಾಗ್ ಎಂಬಲ್ಲಿ ತಲೆಮರೆಸಿಕೊಂಡಿದ್ದ.
ಖಚಿತ ಮಾಹಿತಿ ಆಧಾರದಲ್ಲಿ ನಗರ ಪೋಲೀಸ್ ಠಾಣಾ ಸಿಬ್ಬಂದಿ ಗಣೇಶ್ ಎನ್.ಮತ್ತು ಮಂಜುನಾಥ್ ಅವರು ಆರೋಪಿಯನ್ನು ಮಧ್ಯ ಪ್ರದೇಶದಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
- Advertisement -