


ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂದುವರಿದ ಧಾರಾಕಾರ ಮಳೆ ಹಿನ್ನೆಲೆ ನಿಯಂತ್ರಣ ತಪ್ಪಿ ಉಕ್ಕಿಹರಿಯುವ ಮಾರ್ಕಂಡೇಯ ನದಿಗೆ ಬೈಕ್ ಬಿದ್ದಿದ ಪರಿಣಾಮ ಓರ್ವನನ್ನು ರಕ್ಷಸಿ ಮತ್ತೋರ್ವ ನಾಪತ್ತೆಯಾದ ಘಟನೆ ಕಂಗ್ರಾಳಿ ಬಳಿಯ ಮಾರ್ಕಂಡೇಯ ನದಿಯಲ್ಲಿ ಘಟನೆ ನಡೆದಿದೆ.
ನಾಪತ್ತೆಯಾಧ ಯುವಲ ಬೆಳಗಾವಿ ತಾಲೂಕಿನ ಅಲತ್ತಗಾ ಗ್ರಾಮದ ಓಂಕಾರ ಅರುಣ ಪಾಟೀಲ (23), ಈಜಿ ದಡ ಸೇರಿದ ಯುವಕ ಜ್ಯೋತಿನಾಥ್ ಪಾಟೀಲ ಎಂದು ಗುರುತಿಸಲಾಗಿದೆ.
ಬೈಕ್ನಲ್ಲಿ ಹೋಗುತ್ತಿದ್ದ ಸಹೋದರರ ಪೈಕಿ ಓರ್ವನ ರಕ್ಷಣೆ ಮಾಡಿದ್ದು ಮತ್ತೋರ್ವ ನಾಪತ್ತೆ ಆಗಿದ್ದಾನೆ. ಸದ್ಯ ನಾಪತ್ತೆಯಾದ ಮತ್ತೋರ್ವ ಸಹೋದರನ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರೆದಿದ್ದು ಬೆಳಗಾವಿ ತಾಲೂಕಿನ ಕಂಗ್ರಾಳಿ ಬಳಿಯಿರುವ ಮಾರ್ಕಂಡೇಯ ನದಿಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ಸೋಮವಾರ (ಆ.4) ಶ್ರಾವಣ ಅಮಾವಾಸ್ಯೆ ಹಿನ್ನೆಲೆ ಕಟ್ಟಿಂಗ್ ಮಾಡಿಸಿಕೊಳ್ಳಲು ಬೆಳಗಾವಿಗೆ ಬರುತ್ತಿದ್ದಾಗ ಬೈಕ್ ಸವಾರನ ನಿಯಂತ್ರಣ ತಪ್ಪಿ ಹರಿಯುವ ನೀರಿನಲ್ಲಿ ಬೈಕ್ ಬಿದ್ದಿದೆ. ಈ ವೇಳೆ ಜ್ಯೋತಿನಾಥ ಪಾಟೀಲ ಅಪಾಯದಿಂದ ಪಾರಾಗಿದ್ದು ಈಜಿಕೊಂಡು ದಡ ಸೇರಿದ್ದು ಮತ್ತೋರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಶೋಧ ಕಾರ್ಯಾಚರಣೆ ಮುಂದಯವರಿದಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ನಗರ ಡಿಸಿಪಿ ಪಿ.ವಿ ಸ್ನೇಹಾ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.