- Advertisement -
- Advertisement -
ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಮೂವರು ಪಾರಾದ ಘಟನೆ ಗುಂಡ್ಲುಪೇಟೆ ಚಾಮರಾಜನಗರ ತಾಲ್ಲೂಕಿನ ಬೇಗೂರು ಸಮೀಪದ ಅರೇಪುರ ಗೇಟ್ ಬಳಿ ನಡೆದಿದೆ.
ಕೇರಳದ ಕೋಝಿಕೋಡ್ನಿಂದ ಬೆಂಗಳೂರಿಗೆ ಮೂವರು ತೆರಳುತ್ತಿದ್ದರು.
ಈ ವೇಳೆ ತೂಕಡಿಸಿದ ಚಾಲಕ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಅರೇಪುರ ಗೇಟ್ ಸಮೀಪ ರಸ್ತೆ ಪಕ್ಕದ ಮರಕ್ಕೆ ಢಿಕ್ಕಿಯಾಗಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೇಗೂರು ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
- Advertisement -