ಪುತ್ತೂರು :ರೈಲ್ವೇ ಸೇತುವೆಯ ಇಕ್ಕೆಲಗಳಲ್ಲಿ ಅಳವಡಿಸಿರುವ ಸೇಫ್ ಗಾರ್ಡ್ ಕಂಬಕ್ಕೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಘಟನೆ ಮಿತ್ತೂರು ಸಮೀಪ ನಡೆದಿದೆ.
ಮಿತ್ತೂರು ಸಮೀಪದ ರೈಲ್ವೇ ಬ್ರಿಡ್ಜ್ ಬಳಿಯ ಸೇಫ್ ಗಾರ್ಡ್ ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೇಫ್ ಗಾರ್ಡ್ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.ಘಟನೆಯಿಂದಾಗಿ ಮಾಣಿ-ಮೈಸೂರು ಹೆದ್ದಾರಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಈ ಹಿಂದೆಯೂ ಹಲವು ಬಾರಿ ಈ ರೈಲ್ವೇ ಸೇಫ್ ಗಾರ್ಡ್ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ರೈಲ್ವೇ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ಸ್ಥಳೀಯ ನಾಗರೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಿತ್ತೂರು ಶಾಲೆಯ ಪಕ್ಕದಲ್ಲಿ ಈ ರೈಲ್ವೇ ಸೇಫ್ ಗಾರ್ಡ್ ಕಂಬ ಇದೆ. ಮಕ್ಕಳು, ನಾಗರೀಕರು ಆ ಜಾಗದಲ್ಲಿ ನಡೆದುಕೊಂಡು ಹೋಗುವುದು ತುಂಬಾನೇ ಅಪಾಯ ಹಾಗಾಗಿ ಇವತ್ತು ಸ್ಥಳೀಯರು ರೈಲ್ವೇ ಇಲಾಖೆಗೆ ಮತ್ತೊಮ್ಮೆ ಮನವಿಯನ್ನು ಮಾಡಿರುತ್ತಾರೆ. ನಾಳೆ ಈ ರೈಲ್ವೇ ಸೇಫ್ ಗಾರ್ಡ್ ಕಂಬ ಸಮರ್ಪಕವಾಗಿ ಸರಿ ಮಾಡದಿದ್ದರೆ ನಾಳೆ ತೀವ್ರ ರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.