Thursday, May 2, 2024
spot_imgspot_img
spot_imgspot_img

ಕಾಸರಗೋಡು: ದೋಣಿಯಿಂದ ನದಿಗೆ ಬಿದ್ದ ಗಲ್ಫ್ ಉದ್ಯೋಗಿಯ ಮೃತ ದೇಹ ಪತ್ತೆ

- Advertisement -G L Acharya panikkar
- Advertisement -

ಕಾಸರಗೋಡು:ದೋಣಿಯಿಂದ ನದಿಗೆ ಬಿದ್ದು ಗಲ್ಫ್ ಉದ್ಯೋಗಿಯೋರ್ವರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಬಳಿಕ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ಕಾಸರಗೋಡಿನ ಚಂದ್ರಗಿರಿ ನದಿಯ ಚೇರೂರು ಎಂಬಲ್ಲಿ ನಡೆದಿದೆ.

ವಿದ್ಯಾನಗರ ಪಾಣಲಂನ ಅಬ್ದುಲ್ ಮಜೀದ್ (54) ಮೃತ ದುರ್ದೈವಿ.
ಮಜೀದ್ ಅವರು ಅ. 26 ರ ತಡರಾತ್ರಿ ಸ್ನೇಹಿತರ ಜೊತೆ ನದಿಯಲ್ಲಿ ದೋಣಿಯಲ್ಲಿ ತೆರಳುತ್ತಿದ್ದಾಗ ನದಿ ಪಾಲಾಗಿದ್ದು, ಬಳಿಕ ಸ್ನೇಹಿತರು ದಡಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮಜೀದ್ ಅವರಿಗಾಗಿ ಶೋಧ ನಡೆಸಿದ್ದರು. ಇದೀಗ ಮಜೀದ್ ಅವರ ಮೃತ ದೇಹ ಮೇಲಕ್ಕೆತ್ತಲಾಗಿದ್ದು, ವಿದ್ಯಾನಗರ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಉಂಟಾದ ಸಂಶಯದ ಹಿನ್ನಲೆ ಮಜೀದ್ ಸ್ನೇಹಿತರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೂ ಮುನ್ನ ಸ್ನೇಹಿತರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಇದರಿಂದ ಮಜೀದ್ ಅವರ ಸಾವಿಗೆ ಬೇರೆ ಕಾರಣವಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಲಭಿಸಿದ ಬಳಿಕವಷ್ಟೇ ಘಟನೆಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!