Saturday, May 18, 2024
spot_imgspot_img
spot_imgspot_img

ಮಂಗಳೂರು: ಧರೆಗುರುಳಿದ ಐತಿಹಾಸಿಕ ಕಾಂತಬಾರೆ-ಬೂದಬಾರೆ ತೊಟ್ಟಿಲು ಮರ ಕಾಂತಬಾರೆ – ಬೂದಬಾರೆ ಆಡಿ ಬೆಳೆದುದಕ್ಕೆ ಸಾಕ್ಷಿಯಾಗಿದ್ದ ಮರ ಇನ್ನು ನೆನಪು ಮಾತ್ರ

- Advertisement -G L Acharya panikkar
- Advertisement -
This image has an empty alt attribute; its file name is VC_PUC_-1-819x1024.jpg

ಮಂಗಳೂರು: ಐತಿಹಾಸಿಕ, ಲಕ್ಷಾಂತರ ಮಂದಿ ನಂಬುವ ಮೂಲ್ಕಿ ತಾಲೂಕಿನ ಕೊಲ್ಲೂರಿನ ಶ್ರೀ ಕಾಂತಬಾರೆ – ಬೂದಬಾರೆ ಜನ್ಮಕ್ಷೇತ್ರದ ಜೀವಂತ ಸಾಕ್ಷಿಯಾಗಿದ್ದ ತಾಕೊಡೆ ಮರ ಶುಕ್ರವಾರ ನೆಲಕ್ಕುರುಳಿದೆ.
ಜೀವಂತ ಸಾಕ್ಷಿಯಾಗಿ ಬೃಹತ್ತಾಗಿ ಬೆಳೆದು ನಿಂತಿದ್ದ ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ- ಬೂದ ಬಾರೆ ಜನ್ಮಕ್ಷೇತ್ರದ ತಾಕೊಡೆ ಮರ ಶುಕ್ರವಾರ ಬುಡಸಹಿತ ಧರೆಗುರುಳಿದೆ. ಸುಮಾರು 800ರಿಂದ 1,000 ವರ್ಷಗಳ ಹಿನ್ನೆಲೆ ಈ ತಾಕೊಡೆ ಮರಕ್ಕೆ ಇತ್ತು ಅನ್ನುವುದು ಅಧ್ಯಯನಗಳಿಂದಲೂ ದೃಢಪಟ್ಟಿತ್ತು.

ಇತಿಹಾಸದ ಪ್ರಕಾರ, ಕಾಂತಬಾರೆ-ಬೂದಬಾರೆ ಅವಳಿಗಳು ಮುಲ್ಕಿ ಸಾವಂತ ರಾಜರ ಹೆಸರಾಂತ ಯೋಧ ಲೆಫ್ಟಿನೆಂಟ್‌ಗಳಾಗಿದ್ದರು. ಇನ್ನು ದಂತಕಥೆಯ ಪ್ರಕಾರ, ಅವರು ಈ ಮರದ ಕೆಳಗೆ ಜನಿಸಿದರು ಮತ್ತು ಅವರ ಜನನದ ನಂತರ ಅವರನ್ನು ತಾಕೊಡೆ ಮರದ ಕೊಂಬೆಗೆ ತೊಟ್ಟಿಲು ಕಟ್ಟಿ ತೂಗಲಾಗುತ್ತಿತ್ತು.

- Advertisement -

Related news

error: Content is protected !!