Saturday, June 28, 2025
spot_imgspot_img
spot_imgspot_img

ಕಾರವಾರ : ಕಾಳಿ ನದಿಗೆ ಬಿದ್ದಿದ್ದ ಲಾರಿ ಹೊರಕ್ಕೆ ,: ಈಶ್ವರ ಮಲ್ಪೆ ತಂಡದ ಪ್ರಯತ್ನ ಸಫಲ

- Advertisement -
- Advertisement -

ಕಾರವಾರ : ಕೋಡಿಭಾಗ್ ಸೇತುವೆ ಕಾಳಿ ನದಿಗೆ ಬಿದ್ದು ಲಾರಿಯೊಂದು ನದಿ ಪಾಲಾದ ಘಟನೆ ಆ.07ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿತ್ತು. ನಿನ್ನೆ ನದಿಗೆ ಬಿದ್ದಿದ್ದ ಲಾರಿ ಹೊರಕ್ಕೆ ತೆಗೆಯುವಲ್ಲಿ ರಕ್ಷಣಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಕಳೆದ ಆಗಸ್ಟ್ 6 ರ ಮಧ್ಯರಾತ್ರಿ ಸೇತುವೆ ಕುಸಿದಿತ್ತು, ಈ ವೇಳೆ ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ಸತತ ೯ ಗಂಟೆ ಕಾರ್ಯಚರಣೆ ಮೂಲಕ ರಕ್ಷಣಾ ಸಿಬ್ಬಂದಿಗಳು ಇಂದು ಮೇಲಕ್ಕೆತ್ತಿದ್ದಾರೆ. ಮಳೆ ಪ್ರಮಾಣ ತಗ್ಗಿದ ಹಿನ್ನೆಲೆ ಇಂದು ಬೆಳಿಗ್ಗೆ‌ 9 ಗಂಟೆಯಿಂದ ಐಆರ್​ಬಿ ಹಾಗೂ ಜಿಲ್ಲಾಡಳಿತದಿಂದ ಜಂಟಿ ಕಾರ್ಯಾಚರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ಸ್ಥಳದಲ್ಲಿ ಪೊಲೀಸರು, ಅಧಿಕಾರಿಗಳು ಬೀಡು ಬಿಟ್ಟಿದ್ದರು. ತಮಿಳುನಾಡು ಮೂಲದ ಸೆಂಥಿಲ್ ಒಡೆತನದ ಲಾರಿಯನ್ನು 2 ಕ್ರೇನ್, 3 ಟೋಯಿಂಗ್ ವೆಹಿಕಲ್, ಈಶ್ವರ ಮಲ್ಪೆ ತಂಡದಿಂದ ಹೊರತೆಗೆಯಲಾಗಿದೆ. 100ಕ್ಕೂ ಹೆಚ್ಚು ಜನರ ಪ್ರಯತ್ನ ಸಫಲವಾಗಿದೆ.

- Advertisement -

Related news

error: Content is protected !!