Friday, May 17, 2024
spot_imgspot_img
spot_imgspot_img

ಬಸ್ ಚಾಲಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು

- Advertisement -G L Acharya panikkar
- Advertisement -
vtv vitla

ಕಲಬುರಗಿ: ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಮೂವರು ದುಷ್ಕರ್ಮಿಗಳು ಚಾಲಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.

ಡಿಪೋ 3ರ ಚಾಲಕ ನಾಗಯ್ಯ ಸ್ವಾಮಿ (45) ಮೃತ ದುರ್ದೈವಿ. ಮೃತ ನಾಗಯ್ಯ ಸ್ವಾಮಿ ಹಾಗೂ ಕುಟುಂಬಸ್ಥರ ಆಕ್ರಂದನ ನಾಗಯ್ಯ ಸ್ವಾಮಿ ಕರ್ತವ್ಯ ಮುಗಿಸಿ ಸಿಟಿ ಬಸ್ ನಿಲ್ದಾಣಕ್ಕೆ ಬಸ್ ತಂದು ನಿಲ್ಲಿಸಿದ್ದಾರೆ. ಇವರಿಗಾಗಿ ಕಾದುಕುಳಿತಿದ್ದ ಹಂತಕರು, ಚಾಲಕ ನಾಗಯ್ಯ ಬಸ್‌ನಲ್ಲಿ ಇದ್ದಾಗಲೇ ಮಚ್ಚು, ಲಾಂಗ್‌ನಿಂದ ದಾಳಿ ಮಾಡಿ, ಮನಬಂದಂತೆ ಬೀಸಿದ್ದಾರೆ. ನಾಗಯ್ಯ ತಪ್ಪಿಸಿಕೊಳ್ಳಲು ಆಗದಂತೆ ಹಂತಕರು ಲಾಕ್‌ ಮಾಡಿದ್ದರು.

ನೂರಾರು ಜನರು ಇರುವಾಗಲೇ ನಾಗಯ್ಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬ್ರಹ್ಮಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

- Advertisement -

Related news

error: Content is protected !!