Saturday, June 28, 2025
spot_imgspot_img
spot_imgspot_img

ಅರುಣಾಚಲದ ಹೊಟೇಲ್‌ನಲ್ಲಿ ಕೇರಳದ ವೈದ್ಯ ದಂಪತಿ ಹಾಗೂ ಸ್ನೇಹಿತೆ ಸೇರಿ ಮೂವರ ನಿಗೂಢ ಸಾವು

- Advertisement -
- Advertisement -

ಕೇರಳ ಮೂಲದ ಆಯುರ್ವೇದ ವೈದ್ಯ ದಂಪತಿ ಹಾಗೂ ಅವರ ಅವಿವಾಹಿತ ಸ್ನೇಹಿತೆ ಅರುಣಾಚಲ ಪ್ರದೇಶದ ಜಿರೋ ನಗರದ ಹೊಟೇಲೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ.

ಪ್ರಾಥಮಿಕ ವರದಿಯ ಪ್ರಕಾರ, ಮೃತರ ಕೈ ಮಣಿಕಟ್ಟಿನಲ್ಲಿ ಹರಿತವಾದ ಆಯುಧಗಳಿಂದ ಕತ್ತರಿಸಿಕೊಂಡ ಗುರುತುಗಳಿದ್ದು, ರಕ್ತಸ್ರಾವವಾಗಿ ಸಾವನ್ನಪ್ಪಿದಂತೆ ಭಾಸವಾಗುತ್ತಿದೆ.

ಮೃತರನ್ನು ನವೀನ್ ಥಾಮಸ್ (35) ಮತ್ತು ಅವರ ಪತ್ನಿ ದೇವಿ (35) ಹಾಗೂ ಇವರ ಜೊತೆಗೆ ಸಾವನ್ನಪ್ಪಿದ ಸ್ನೇಹಿತನನ್ನು ಆರ್ಯ ಬಿ ನಾಯರ್ (29) ಎಂದು ಗುರುತಿಸಲಾಗಿದೆ. ಇದರಲ್ಲಿ ದಂಪತಿಯಾದ ನವೀನ್ ಥಾಮಸ್ ಹಾಗೂ ದೇವಿ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಆಯುರ್ವೇದ ವೈದ್ಯರಾಗಿದ್ದರು. ಹಾಗೆಯೇ ಆರ್ಯ ಬಿ, ನಾಯರ್ ತಿರುವನಂತಪುರ ನಿವಾಸಿಯಾಗಿದ್ದು, ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಮೂವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಈಶಾನ್ಯ ರಾಜ್ಯಕ್ಕೆ ತಂಡವನ್ನು ಕಳುಹಿಸಲಿದ್ದಾರೆ. ಸಾವಿಗೆ ಮಾಟಮಂತ್ರವೇ ಕಾರಣ ಎಂದು ಹೇಳಲಾಗುತ್ತಿದ್ದು, ಆದರೆ ಪೊಲೀಸರು ಇದರ ಬಗ್ಗೆ ಹೆಚ್ಚು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಮೂವರ ವರ್ತನೆಯನ್ನು ಏನೋ ಅಸಹಜ ವರ್ತನೆ ಇತ್ತು ಎಂದು ತಿರುವನಂತಪುರಂ ನಗರ ಪೊಲೀಸ್ ಆಯುಕ್ತ ಸಿ ನಾಗರಾಜು ಹೇಳಿದ್ದಾರೆ. ತನಿಖೆ ಮುಗಿದ ಬಳಿಕ ಅಲ್ಲಿಂದ ಸಾಕ್ಷ್ಯ ತರುತ್ತೇವೆ., ಸ್ವಲ್ಪ ಸಮಯ ಹಿಡಿಯುತ್ತದೆ ಎಂದರು. ಮೂವರು ಅಲ್ಲಿಗೆ ಏಕೆ ಹೋದರು ಮತ್ತು ಅವರು ಹೇಗೆ ಸತ್ತರು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದಿದ್ದಾರೆ.

- Advertisement -

Related news

error: Content is protected !!