- Advertisement -
- Advertisement -
ಕಡಬ : ಆರು ತಿಂಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಎಡಮಂಗಲದ ಕಾರಂಜಿಗುಡ್ಡ ಎಂಬಲ್ಲಿ ಪತ್ತೆಯಾಗಿದೆ.
ಅಸ್ಥಿಪಂಜರವು ಆರು ತಿಂಗಳ ಹಿಂದೆ ಕಾಣೆಯಾಗಿದ್ದ ಬಾಲಕೃಷ್ಣ ಗೌಡರದೆಂದು ತಿಳಿದುಬಂದಿದೆ. ಸ್ಥಳೀಯರು ಸೊಪ್ಪು ತರಲು ಗುಡ್ಡೆಗೆ ಹೋಗಿದ್ದಾಗ ಈ ಅಸ್ಥಿಪಂಜರ ಕಂಡು ಬಂದಿದೆ.
ಈ ಬಗ್ಗೆ ಮೃತರ ಪುತ್ರ ಯತೀಶ್ ಎಂಬವರು ಪೊಲೀಸರಿಗೆ ಮಾಹಿತಿ ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳ್ಳಾರೆ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಮರದಿಂದ ಮರ ಕೆಸು ಸಂಗ್ರಹಿಸುವಾಗ ಮರದಿಂದ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.
- Advertisement -