Sunday, April 28, 2024
spot_imgspot_img
spot_imgspot_img

ತಾಯಿಯನ್ನು ಚುಡಾಯಿಸಿದ ಯುವಕನನ್ನು ಕೊಲೆಗೈದ ಮಗ..!

- Advertisement -G L Acharya panikkar
- Advertisement -

ತಾಯಿಯನ್ನು ಚುಡಾಯಿಸಿದ ಯುವಕನನ್ನು ಮಗನೊಬ್ಬ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಕೊಲೆ ಮಾಡಿದ ಯುವಕ ತರುಣ್ ನಾಯ್ಕ ಮತ್ತು ಕೊಲೆಯಾದ ಯುವಕ ಗಣೇಶ್ (25) ಎಂದು ಗುರುತಿಸಲಾಗಿದೆ.

ತಾಯಿಯನ್ನು ಗಣೀಶ್ ಕಾಂಬಳೆ ಚುಡಾಯಿಸಿದ್ದ ಅನ್ನೋ ವಿಚಾರ ಗೊತ್ತಾಗಿ ರೊಚ್ಚಿಗೆದ್ದಿದ್ದ ತುರುಣ್ ನಾಯ್ಕ ಕೈಲಿ ದೊಣ್ಣೆ ಹಿಡಿದು ಪ್ರಶ್ನೆ ಮಾಡಲು ಹೋಗಿದ್ದಾನೆ. ಈ ವೇಳೆ ಗಲಾಟೆ ನಡೆದಿದ್ದು, ಕೈಲಿದ್ದ ದೊಣ್ಣೆಯಿಂದ ಗಣೇಶ್ ಕಾಂಬಳೆ ತಲೆಗೆ ಬಲವಾಗಿ ಹೊಡೆದಿದ್ದಾನೆ.

ದೊಣ್ಣೆಯ ಏಟಿಗೆ ಗಣೇಶ್ ಕಾಂಬಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳದಿಂದ ಆರೋಪಿ ತರುಣ್ ನಾಯ್ಕ ಪರಾರಿಯಾಗಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರೋಣೊತ್ತರ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿಯನ್ನ ಹುಡುಕಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೊಲೆಗೆ ಕಾರಣ ತಿಳಿಸಿದ ಆರೋಪಿ ತನ್ನ ತಾಯಿಯನ್ನು ಚುಡಾಯಿಸಿದ ಅನ್ನೋ ಕಾರಣಕ್ಕೆ ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

- Advertisement -

Related news

error: Content is protected !!