- Advertisement -
- Advertisement -
ಟಿಪ್ಪರ್ ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು-ಬಂಗಾರಪೇಟೆ ರಸ್ತೆಯ ಚಿಕ್ಕ ಕುಂತೂರು ಸಮೀಪ ನಡೆದಿದೆ.
ಮೃತಪಟ್ಟವರನ್ನು ಟೇಕಲ್ ಹೋಬಳಿ ಮಿಟ್ಟಗಾನಹಳ್ಳಿಯ ಸುಮನ್ ರಾಜ್ ಮತ್ತು ಸುದೀಪ್ ಎಂದು ಗುರುತಿಸಲಾಗಿದೆ.
ಅಪಘಾತದ ವೇಳೆ ಟಿಪ್ಪರ್ ಚಕ್ರಕ್ಕೆ ಸಿಲುಕಿ ಯುವಕರು ಮೃತಪಟ್ಟಿದ್ದಾರೆ. ಟೇಕಲ್ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -