- Advertisement -
- Advertisement -
ಬೆಂಗಳೂರು: ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಟಿಪ್ಪು ಆರ್ಮಿ ಮುಖಂಡ ಫೈರೋಜ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರದ ನಿವಾಸಿಯಾಗಿರುವ ಫೈರೋಜ್ ಖಾನ್ ಗಲಾಟೆಯಲ್ಲಿ ನೇರವಾಗಿ ಭಾಗಿಯಾಗದಿದ್ದರೂ, ಈ ಘಟನೆಗೆ ತಂತ್ರ ರೂಪಿಸಿದ್ದ ಎನ್ನಲಾಗಿದೆ. ಸಂಜೆ 6 ಗಂಟೆಗೆ ಮೆಸೇಜ್ ಶೇರ್ ಮಾಡಿದ ಫೈರೋಜ್ ಖಾನ್, ಯಾರ್ಯಾರು ಯಾವ ಏರಿಯಾಗಳಿಗೆ ಹೋಗಬೇಕು ಎಂದು ತಿಳಿಸಿದ್ದ ಎಂದು ತಿಳಿದುಬಂದಿದೆ. ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆಗಾಗಿ ಫೈರೋಜ್ ಖಾನ್ ಮೊಬೈಲ್ ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
- Advertisement -