- Advertisement -
- Advertisement -
ತಿರುಪತಿ: ಪ್ಲಾಸ್ಟಿಕ್ ಮುಕ್ತ ತಿರುಪತಿಗಾಗಿ ಟಿಟಿಡಿ ಭಕ್ತಾದಿಗಳಿಗಾಗಿ ಪುನರ್ ಬಳಕೆಯ ಹಸಿರು ಮಂತ್ರ ಚೀಲಗಳನ್ನು ನೀಡುತ್ತಿದೆ.
ಈ ಚೀಲಗಳಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. 180 ದಿನಗಳಲ್ಲಿ ಚೀಲ ಗೊಬ್ಬರವಾಗಿ ಬದಲಾಗುತ್ತದೆ. ದೇವಾಲಯದ ಲಡ್ಡು ಪ್ರಸಾದ ಕೌಂಟರ್ ನಲ್ಲಿ ಭಕ್ತಾದಿಗಳಿಗೆ ಮಂತ್ರ ಚೀಲಗಳು ಲಭ್ಯವಿವೆ ಎಂದು ಟಿಟಿಡಿ ತಿಳಿಸಿದೆ.
ತಿಮ್ಮಪ್ಪನ ಸನ್ನಿದಿಯಲ್ಲಿ ಪರಿಸರ ಸ್ನೇಹಿ ಹಸಿರು ಮಂತ್ರ ಚೀಲ ಬಳಕೆ ಪೇಪರ್ ಮತ್ತು ಸೆಣಬಿನ ಚೀಲಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 5 ಲಡ್ಡುವಿನ ಬ್ಯಾಗ್ ಗೆ 3 ಮತ್ತು 10 ಲಡ್ಡುವಿನ ಬ್ಯಾಗ್ ಗೆ 6 ರೂ. ಎಂದು ತಿರುಪತಿ ತಿರುಮಲ ದೇವಸ್ಥಾನ ಕಮಿಟಿ ತಿಳಿಸಿದೆ.
- Advertisement -