- Advertisement -
- Advertisement -
ಕಾರವಾರ: ವಾಯುಭಾರ ಕುಸಿತ ಹಿನ್ನೆಲೆ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಈ ಮಧ್ಯೆ ಜಿಲ್ಲಾ ಮೀನುಗಾರರು ಸಾಂಪ್ರದಾಯಕ ಮೀನುಗಾರಿಕೆಗೆ ತೆರಳಿದ್ದು, ಭರ್ಜರಿ ಮೀನು ಬಲೆಗೆ ಬಿದ್ದಿದೆ.
ಕಾರವಾರ ನಗರದ ರವೀಂದ್ರನಾಥ ಕಡಲತೀರದ ಒಂದು ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದಾಗ. ರಾಶಿ ರಾಶಿ ಮೀನು ಬಲೆಗೆ ಬಿದ್ದಿದೆ. ಬಲೆ ತುಂಬ ತುಂಬ ಮೀನು ತುಂಬಿಕೊಂಡಿದ್ದರಿಂದ ಮೀನುಗಾರರ ತಂಡ ಸಮುದ್ರದಿಂದ ಬಲೆ ಮೇಲೆ ತರಲು ಹರಸಾಹಸ ಪಟ್ಟಿದ್ದಾರೆ. ಮೀನಿನ ದರ ಬೇರೆ ಅಧಿಕವಾಗಿದ್ದು, ಕಾರವಾರ ಜನ ನೇರವಾಗಿ ಕಡಲತೀರಕ್ಕೆ ಬಂದು ಮೀನನ್ನ ಖರೀದಿಸಿದ್ದಾರೆ.
- Advertisement -