- Advertisement -
- Advertisement -
ಉಡುಪಿ: ಚಲಿಸುತ್ತಿದ್ದ ರಿಕ್ಷಾವೊಂದರ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಪ್ರಯಾಣಿಕರಿಬ್ಬರು ಮೃತಪಟ್ಟ ಘಟನೆ ನಡೆದಿದೆ. ಕಾಪು ಮಜೂರು ಚಂದ್ರನಗರದ ಬಳಿ ಈ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಗಳನ್ನು ಪಾದೂರು ನಿವಾಸಿ ಪುಷ್ಪಾ (49) ಹಾಗೂ ಕಳತ್ತೂರಿನ ಕೃಷ್ಣ ಮುಖುರಿ ಎಂದು ಗುರುತಿಸಲಾಗಿದೆ.
ಮಜೂರಿನಿಂದ ಮಲ್ಲಾರು ಕಡೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ರಿಕ್ಷಾವೊಂದಕ್ಕೆ ಬೃಹತ್ ಮರ ಉರುಳಿ ಬಿದ್ದಿದೆ. ಶಿರ್ವ ಕಡೆ ಕಾಪುವಿನ ಶರೀಫ್ ಎಂಬವರ ರಿಕ್ಷಾದಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದೆ. ಚಾಲಕ ಶರೀಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೃಹತ್ ಮರವಾಗಿದ್ದರಿಂದ ರಿಕ್ಷಾದ ಮೇಲೆ ಬಿದ್ದ ಮರ ತೆರವುಗೊಳಿಸಲು ಕ್ರೇನ್ ಬಳಸಲಾಯಿತು. ಘಟನೆಯಲ್ಲಿ ಎರಡು ರಿಕ್ಷಾ ಜಖಂಗೊಂಡಿದ್ದು, ಇನ್ನೋರ್ವ ರಿಕ್ಷಾ ಚಾಲಕ ದಿನೇಶ್ ಎಂಬವರು ಪವಾಡ ಸದೃಶ್ಯವಾಗಿ ಪರಾಗಿದ್ದಾರೆ. ಅವರ ರಿಕ್ಷಾದ ಮುಂಭಾಗ ಸಂಪೂರ್ಣ ಜಖಂ ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
- Advertisement -