Tuesday, July 1, 2025
spot_imgspot_img
spot_imgspot_img

ತುಳುಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ-ಸಚಿವ ಎಸ್. ಅಂಗಾರ

- Advertisement -
- Advertisement -

ಬೆಂಗಳೂರು: ತುಳು ಭಾಷೆಗೆ ಸಂಬಂಧಿಸಿದಂತೆ ಇರುವ ತುಳು ಅಕಾಡೆಮಿ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ ಇದೇ 7ನೇ ತಾರೀಖು ನಡೆಯಲಿದೆ ಎಂದು ಮೀನುಗಾರಿಕೆ ಸಚಿವ ಎಸ್​​.ಅಂಗಾರ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಅಂಗಾರ ರವರು ಕರ್ನಾಟಕ‌ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರಧಾನ ಸಮಾರಂಭ ಮಾರ್ಚ್​​ 7 ರಂದು ನಡೆಯಲಿದೆ, ಸಿಎಂ ಬಿ.ಎಸ್. ಯಡಿಯೂರಪ್ಪ ರವರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೇವೆ. ತುಳು ನಾಡಿನ‌ ಸಚಿವನಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ ಎಂದರು.

ಇದೇ ವೇಳೆ ತುಳುವರು ಎಂದೂ ಪ್ರತ್ಯೇಕ ರಾಜ್ಯ ಕೇಳುವವರಲ್ಲ ಎಂದು ಹೇಳಿದ ಸಚಿವರು, ತುಳು‌ಲಿಪಿಯನ್ನು ಉಳಿಸಬೇಕೆಂಬ ಕಾರಣಕ್ಕೆ ತುಳುವಿಗೆ ರಾಜ್ಯಭಾಷೆಯ ಮಾನ್ಯತೆ ಕೇಳುತ್ತಿದ್ದೇವೆ‌. ಇದರಿಂದ ಒಂದರಿಂದ ಐದನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತುಳುವ ಭಾಷೆಯನ್ನು ಐಚ್ಛಿಕ ಭಾಷೆಯಾಗಿ ಕಲಿಸಲಾಗುತ್ತದೆ ಎಂದರು.

- Advertisement -

Related news

error: Content is protected !!