Sunday, June 29, 2025
spot_imgspot_img
spot_imgspot_img

ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದ ಹಿಂದೂ ಸಾಮ್ರಾಟ್ ಧರ್ಮ ಸೇನೆಯ ಸಂಸ್ಥಾಪಕ ಮಧುಗಿರಿ ಮೋದಿ!

- Advertisement -
- Advertisement -

ತುಮಕೂರು: ಹಿಂದೂ ಸಾಮ್ರಾಟ್ ಧರ್ಮ ಸೇನೆಯ ಸಂಸ್ಥಾಪಕ ಮಧುಗಿರಿ ಮೋದಿಯವರು ನನಗೆ ದಯಾಮರಣ ನೀಡಿ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಲವ್ ಜಿಹಾದ್ ಗೋ ಹತ್ಯೆ ಅತ್ಯಾಚಾರ ಭಯೋತ್ಪಾದನೆ ಭ್ರಷ್ಟಾಚಾರ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದೇನೆ ಆದರೆ ಜಿಲ್ಲಾ ಪೊಲೀಸ್ ಇಲಾಖೆಯು ನಿರಂತರ ವಿಚಾರಣೆ ನೆಪದಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಿತ್ತೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸುಳ್ಳು ಕೇಸು ದಾಖಲಿಸಿ ಪೊಲೀಸರು ಹಲವು ಬಾರಿ ನನ್ನನ್ನು ಬಂಧಿಸಿದ್ದಾರೆ. ಕಿರುಕುಳವನ್ನು ಸಹಿಸಲಾಗುತ್ತಿಲ್ಲ ದಯಾಮರಣವನ್ನು ನೀಡಿ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಪತ್ರದ ಮೂಲಕ ಮನವಿಯನ್ನು ಸಲ್ಲಿಸಿದ್ದಾರೆ.

ಅತ್ಯಾಚಾರಿಗಳು ಭ್ರಷ್ಟರು ಭಯೋತ್ಪಾದಕರಿಗೆ ಇಲ್ಲದ ವಿಚಾರಣೆ, ಮಾನಸಿಕ ಕಿರುಕುಳ ನನಗೇಕೆ? ಇದನ್ನೆಲ್ಲಾ ಪ್ರಶ್ನಿಸಲು ನನ್ನವರು ಯಾರು ಇಲ್ಲ. ನಾನೇ ಪ್ರಶ್ನಿಸಬೇಕು ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಹೀಗಾಗಿ ದಯಾಮರಣ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

- Advertisement -

Related news

error: Content is protected !!