Sunday, June 29, 2025
spot_imgspot_img
spot_imgspot_img

ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು; ಮೂವರು ಅಸ್ವಸ್ಥ..!

- Advertisement -
- Advertisement -

ಅಪ್ಪ-ಅಮ್ಮನ ಬಳಿ ರಜೆಗೆ ಬಂದ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ‌ನಡೆದಿದೆ.

ಮೃತಪಟ್ಟವರನ್ನು ಆರತಿ (7), ಪ್ರಿಯಾಂಕ್ (9) ಹಾಗೂ ಅಸ್ವಸ್ಥಗೊಡಿರುವ ಪೋಷಕರಾದ ಹುಸೇನಮ್ಮ (35), ಮಾರುತಿ (40), ಲಕ್ಷ್ಮಣ್ (60) ಎಂದು ಗುರುತಿಸಲಾಗಿದೆ.

ಮೂಲತಃ ಲಿಂಗಸೂಗೂರು ತಾಲೂಕಿನ ಕಮಲದಿನ್ನಿ ಗ್ರಾಮದಿಂದ ವಡ್ಲೂರಿಗೆ ಕೂಲಿ ಕೆಲಸಕ್ಕೆ ಬಂದಿದ್ದರು. ಬ್ರಿಕ್ಸ್ ತಯಾರಿಕೆಯಲ್ಲಿ ಈ ಕೂಲಿ ಕಾರ್ಮಿಕ ಕುಟುಂಬ ನಿರತರಾಗಿದ್ದರು. ರಜೆ ನಿಮಿತ್ತ ಪೋಷಕರ ಬಳಿ ಇಬ್ಬರೂ ಮಕ್ಕಳು ಬಂದಿದ್ದರು. ಆದರೆ ವಾಂತಿ- ಭೇದಿಯಿಂದ ಇಬ್ಬರು ಮಕ್ಕಳು ‌ಸಾವನ್ನಪ್ಪಿದ್ದಾರೆ. ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಟುಂಬ ಚಪಾತಿ, ಹೆಸರಕಾಳು, ಅನ್ನ, ಸಾಂಬಾರು ಸೇವಿಸಿದ್ದರು. ಬಳಿಕ ಐವರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಾಣಿಸಿಕೊಂಡಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನು ಮೂವರು ಅಸ್ವಸ್ಥರನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!