Friday, June 27, 2025
spot_imgspot_img
spot_imgspot_img

ಟ್ರ್ಯಾಕ್ಟರ್ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ಇಬ್ಬರು ನೀರುಪಾಲು

- Advertisement -
- Advertisement -

ದೀಪಾವಳಿ ಅಮಾವಾಸ್ಯೆಗೆ ಟ್ರ‍್ಯಾಕ್ಟರ್ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ಇಬ್ಬರು ನೀರುಪಾಲಾದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಬಳಿ ನಡೆದಿದೆ.

ತುಂಗಾಭದ್ರ ನದಿ ಪಾತ್ರದಲ್ಲಿ ಟ್ರ‍್ಯಾಕ್ಟರ್ ತೊಳೆಯಲು ಹೋಗಿದ್ದ ಗ್ರಾಮದ ಪರಶುರಾಮ್(14) ಹಾಗೂ ಆತನ ಚಿಕ್ಕಪ್ಪ ಅಣ್ಣಪ್ಪ (45) ಮೃತ ದುರ್ದೈವಿಗಳು.

ಮರಳುಗಾರಿಕೆಯಿಂದ ತುಂಗಾಭದ್ರ ನದಿಯಲ್ಲಿ ಗುಂಡಿಗಳಾಗಿರುವ ಹಿನ್ನೆಲೆ, ಗುಂಡಿಗಳಲ್ಲಿ ಸಿಲುಕಿ ನೀರಲ್ಲಿ ಮುಳುಗಿದ್ದಾರೆ. ಈ ವೇಳೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದರು. ದುರಾದೃಷ್ಟವಶಾತ್ ರಕ್ಷಣೆ ಮಾಡುವ ವೇಳೆಗೆ ಇಬ್ಬರೂ ಸಾವನ್ನಪ್ಪಿದ್ದರು.

ತುಂಗಾಭದ್ರ ನದಿಪಾತ್ರದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಕ್ರಮ ಮರಳುಗಾರಿಕೆಯಿಂದಲೇ ಇಂತಹ ಅನಾಹುತ ಆಗಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿ ಈ ಘಟನೆ ನಡೆದಿದೆ.

- Advertisement -

Related news

error: Content is protected !!