- Advertisement -
- Advertisement -

ವಿಜಯಪುರ: ಇತ್ತೀಚಿಗೆ ನಗರವೂ ಸೇರಿದಂತೆ ಹಲವಡೆ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂದಿಸಿದ್ದು, ಆರೋಪಿಗಳಿಂದ 11 ಲಕ್ಷ ರೂ. ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನುಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ವೀರಭದ್ರ ಶಿವಶರಣ ಕುಂಬಾರ (31), ಶ್ರೀಶೈಲ ಶಂಕ್ರೇಪ್ಪ ಬಿರಾದಾರ (31) ಎಂದು ಗುರುತಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಎನ್.ಬಿ.ಉಪ್ಪಲದಿನ್ನಿ, ಆಸೀಫ್ ಗುಡಗುಂಟಿ, ಎಸ್.ತೆಲಗಾಂವ, ಲಕ್ಷ್ಮಣ ಬಿರಾದಾರ, ರಮೇಶ ಜಾಧವ, ಸಂತೋಷ ಮೇಲಸಕ್ರಿ, ಆನಂದ ಹಿರೇಕುರಬರ, ಎಸ್.ಆರ್.ಪೂಜಾರಿ, ಸುರೇಶ ಕುಂಬಾರ ಭಾಗಿಯಾಗಿದ್ದರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಕಾರ್ಯವೈಖರಿಯನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಶ್ಲಾಘಿಸಿದ್ದಾರೆ.
- Advertisement -








