- Advertisement -
- Advertisement -







ಉಡುಪಿ: ಮುಂಗಾರು ಮಳೆ ಪ್ರಾರಂಭಗೊಳ್ಳಬೇಕಿದ್ದ ಜೂನ್ 1ರಿಂದ ಹಠಾತ್ತನೆ ಕೈಕೊಟ್ಟು ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಮಳೆ ಇಂದು ಸಂಜೆಯಿಂದ ಜಿಲ್ಲೆಯಾದ್ಯಂತ ಮತ್ತೆ ಬಿರುಸಿನಿಂದ ಸುರಿಯತೊಡಗಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಣೆಯಾಗಿದೆ.
ಕರಾವಳಿಯಲ್ಲಿ ಇಂದು ಆರೆಂಜ್ ಅಲರ್ಟ್ ಇದ್ದರೂ ಉತ್ತಮ ಬಿಸಿಲಿತ್ತು. ಆದರೆ ಮಧ್ಯಾಹ್ನದ ಬಳಿಕ ವಾತಾವರಣ ಹಠಾತ್ ಬದಲಾಗಿ ಸಂಜೆ ನಾಲ್ಕು ಗಂಟೆಯ ಬಳಿಕ ಗುಡುಗು ಸಿಡಿಲು ಸಹಿತ ಬಿರುಮಳೆ ಬೀಸತೊಡಗಿತು. ಆಗಾಗ ಜೋರಾದ ಗಾಳಿಯೂ ಬೀಸುತಿದ್ದು ಮಳೆಗಾಲ ಮತ್ತೆ ಬಿರುಸುಗೊಳ್ಳುವ ಸೂಚನೆ ನೀಡಿದೆ.
- Advertisement -