Saturday, June 28, 2025
spot_imgspot_img
spot_imgspot_img

ಉಡುಪಿ: ರೈಲು ಬಡಿದು ವ್ಯಕ್ತಿ ಸಾವು..!

- Advertisement -
- Advertisement -

ಉಡುಪಿ: ಚಲಿಸುತ್ತಿದ್ದ ರೈಲು ಬಡಿದು ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮುರುಡೇಶ್ವರ ಹೈವೇ ಹೊಟೇಲ್ ಎದುರುಗಡೆ ರೈಲ್ವೇ ಹಳಿಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಬ್ರಹ್ಮಾವರ ತಾಲೂಕಿನ ಹೇರೂರು ಮೂಲದ, ಹೇರೂರಿನ ಕೆಪಿಟಿಸಿಎಲ್ ಸಬ್ ಸ್ಟೇಶನ್ ಎದುರುಗಡೆ ನಿವಾಸಿ ಸಂದೀಪ ಕೆ.ಆರ್. (44) ಎಂದು ಗುರುತಿಸಲಾಗಿದೆ.

ಸಂದೀಪ ಅವರು ಯಾವುದೋ ಕಾರಣಕ್ಕಾಗಿ ಮುರುಡೇಶ್ವರ ಹೈವೇ ಹೊಟೇಲ್ ಎದುರಿರುವ ರೈಲ್ವೇ ಹಳಿಯ ಹತ್ತಿರ ಹೋಗುತ್ತಿದ್ದರು. ಈ ವೇಳೆ ಬೆಂಗಳೂರು-ಮೈಸೂರುನಿಂದ ಮುರುಡೇಶ್ವರಕ್ಕೆ ಸಾಗುತ್ತಿದ್ದ ರೈಲು ಬಡಿದಿದೆ. ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮುರುಡೇಶ್ವರ ರೈಲ್ವೇ ಸ್ಟೇಷನ್ ಮಾಸ್ಟರ್ ಉಮೇಶ ನಾಯ್ಕ ಅವರು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!