Monday, June 15, 2026
spot_imgspot_img
spot_imgspot_img

ಉಡುಪಿ: ಡಾ.ಶ್ರುತಿ ಬಲ್ಲಾಳ್‌ಗೆ ‘ಮಿಸೆಸ್ ಅರ್ಥ್ ಇಂಟರ್‌ನ್ಯಾಶನಲ್ ಟೂರಿಸಂ 2024’ ಪ್ರಶಸ್ತಿ

- Advertisement -
- Advertisement -

ಉಡುಪಿ: ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ.ಶ್ರುತಿ ಬಲ್ಲಾಳ್ ಅವರು ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ “ಮಿಸೆಸ್ ಅರ್ಥ್ ಇಂಟರ್‌ನ್ಯಾಶನಲ್ ಟೂರಿಸಂ 2024” ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

10-ದಿನದ ಈವೆಂಟ್ ಅವರ ಬುದ್ಧಿವಂತಿಕೆ, ಪರಿಸರದ ಬಗೆಗಿನ ಸಹಾನುಭೂತಿ ಕಾರಣಗಳಿಗಾಗಿ ಗುರುತಿಸಿದೆ. ಇದು ಭಾರತೀಯ ಮಹಿಳಾ ಸಬಲೀಕರಣಕ್ಕೆ ಮಹತ್ವದ ಮೈಲಿಗಲ್ಲು. ಡಾ. ಬಲ್ಲಾಳ್ ಅವರು ತಮ್ಮ ವೃತ್ತಿಜೀವನದಲ್ಲಿ ಮಧುಮೇಹ ತಜ್ಞರಾಗಿದ್ದಾರೆ. ಇವರು 100 ಕ್ಕೂ ಹೆಚ್ಚು ಉಚಿತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ಆರೋಗ್ಯಕರ ಜೀವನಕ್ಕಾಗಿ ಯೋಗ, ಧ್ಯಾನ ಮತ್ತು ದೈಹಿಕ ಚಟುವಟಿಕೆಯೊಂದಿಗೆ ಸಾಂಪ್ರದಾಯಿಕ, ಪ್ರಾದೇಶಿಕ, ಕಾಲೋಚಿತ ಮತ್ತು ಸ್ಥಳೀಯ ಆಹಾರ ಪದ್ಧತಿಗಳನ್ನು ಅನ್ವಯಿಸುವುದು ಉತ್ತಮ ಎಂಬುವುದು ಅವರ ಅಭಿಪ್ರಾಯವಾಗಿದೆ. ಈ ಪರಿಸರ ಸ್ನೇಹಿ ವಿಧಾನವು ಮಾನವ ಯೋಗಕ್ಷೇಮ ಮತ್ತು ಪರಿಸರದ ನಡುವೆ ಸಾಮರಸ್ಯದ ಸಂಬಂಧವನ್ನು ಬೆಳೆಸುತ್ತದೆ.

- Advertisement -

Related news

error: Content is protected !!