- Advertisement -
- Advertisement -
ಪುನೀತ್ ರಾಜ್ಕುಮಾರ್ ನಿಧನಕ್ಕೆ ಮನನೊಂದ ಅಭಿಮಾನಿಯೋರ್ವ ಕೈ ಜಜ್ಜಿಕೊಂಡ ಉಡುಪಿಯಲ್ಲಿ ಘಟನೆ ನಡೆದಿದೆ. ಸಾಲಿಗ್ರಾಮದ ರಿಕ್ಷಾ ಡ್ರೈವರ್ ಸತೀಶ್ (35)ಕೈ ಜಜ್ಜಿಕೊಂಡ ಪುನೀತ್ ಅಭಿಮಾನಿ. ಪುನಿತ್ ಅವರಿಗೆ ತನ್ನ ರಿಕ್ಷಾಕ್ಕೆ ಕೈಯನ್ನು ಜಜ್ಜಿಕೊಂಡು ಶ್ರದ್ಧಾಂಜಲಿ ಅರ್ಪಿಸಿದ್ದಾನೆ ಎನ್ನಲಾಗಿದೆ.
ತಮ್ಮ ನೆಚ್ಚಿನ ನಟ ಪುನೀತ್ ನಿಧನದಿಂದ ಮನನೊಂದು ಇಬ್ಬರು ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಅಭಿಮಾನಿಗಳು ತಮ್ಮ ಜೀವ ಕಳೆದುಕೊಂಡಿದ್ದಾರೆ. ನಮ್ಮ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ನೊಂದ ಅಭಿಮಾನಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
- Advertisement -