- Advertisement -
- Advertisement -
ಉಡುಪಿ: ಜಿಲ್ಲಾ ಭೋವಿ ಸಂಘದ ವತಿಯಿಂದ ಬಂಟಕಲ್ಲಿನ ಕುಂಜಾರುಗಿರಿ ಭೋವಿ ಸಂಘದ ವತಿಯಿಂದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಜಿಲ್ಲಾಧ್ಯಕ್ಷರಾದ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ದಿಕ್ಸೂಚಿ ಭಾಷಣಕಾರರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಮಾಜ ಸೇವಕ ಪವನ್ ಕುಮಾರ್ ರವರು ಮಾತನಾಡಿ ಸಹಕಾರ ಮತ್ತು ಸಮುದಾಯ, ಸಮಾನತೆ, ಸ್ವಾತಂತ್ರ್ಯ, ಜೊತೆಗೆ ವ್ಯಕ್ತಿಗಳ ಸಮಾನ ಮೌಲ್ಯವೇ ಪ್ರಜಾಪ್ರಭುತ್ವ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೌರವ ಸಲಹೆಗಾರರಾದ ಜಗದೀಶ ಪರ್ಕಳ ರವರು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಆನಂದ ಕುಂಜಾರುಗಿರಿ ಹಾಗೂ ಕೆ.ಪಿ. ಈಶ್ವರ್, ರಾಜುಕುಮಾರ್ ಉಪಸ್ಥಿತರಿದ್ದರು. ಶಂಕರ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
- Advertisement -