Tuesday, April 30, 2024
spot_imgspot_img
spot_imgspot_img

ಉಡುಪಿ: ಗೆಳೆಯರ ಬಳಗ ಪೆರ್ಡೂರು ಇದರ ವತಿಯಿಂದ 8ನೇ ವರ್ಷದ ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮ

- Advertisement -G L Acharya panikkar
- Advertisement -

ಉಡುಪಿ: ಗೆಳೆಯರ ಬಳಗ ಪೆರ್ಡೂರು ಇದರ ವತಿಯಿಂದ ಆ.6 ರಂದು ಪೆರ್ಡೂರಿನಲ್ಲಿ 8ನೇ ವರ್ಷದ ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮ ನಡೆಯಿತು.

ಉದಯ ಕುಮಾರ್ ಶೆಟ್ಟಿ ಮುನಿಯಲು ಕಾರ್ಯಕ್ರಮವನ್ನು ಉದ್ಘಾಟಸಿ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿ. ಸ್. ಕೆ ಭಟ್, ರಘು ಪ್ರಸಾದ್ ಅಡಿಗ, ಸತೀಶ್ ಶೆಟ್ಟಿ ಕುತ್ಯಾರು ಬೀಡು ಹಾಗೂ ಗೆಳೆಯರಬಳಗ ಸಂಸ್ಥೆಯ ಅಧ್ಯಕ್ಷ ಕೃಷ್ಣ ಪೂಜಾರಿ, ಗೌರವ ಅಧ್ಯಕ್ಷ ಸತೀಶ್ ಅಣ್ಣು, ಸ್ಥಾಪಕ ಅಧ್ಯಕ್ಷ ಸತೀಶ್ ಪಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರ ಶಾಸಕರಾದ ಸುರೇಶ ಶೆಟ್ಟಿ ಗುರ್ಮೆ ಇವರನ್ನು ಸನ್ಮಾನಿಸಲಾಯಿತು. ಸತೀಶ್ ಹೊಸ್ಮರು ಕಾರ್ಯಕ್ರಮ ನಿರೂಪಿಸಿ, ಸಂದೇಶ್ ಟಿ.ವಿ ಸ್ವಾಗತಿಸಿ, ಸುಭಾಷ್ ಶೆಟ್ಟಿ ವಂದಿಸಿದರು.

Insta: glacharyajewellers
Fb: glacharya
- Advertisement -

Related news

error: Content is protected !!