ಉಡುಪಿ: ವ್ಯಕ್ತಿಯೋರ್ವರು ಹೆಬ್ರಿ ತಾಲೂಕಿ ಅಲ್ದಾಡಿ ಗ್ರಾಮದಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದು ಫೆಬ್ರವರಿ 11ರಂದು ಅಲ್ಲಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿರುವ ಘಟನೆ ಹೆಬ್ರಿಯಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿ ಕೇರಳ ಮೂಲದ ಜೋನ್ ಸೆಬಾಸ್ಟಿನ್ (49) ಎಂದು ಗುರುತಿಸಲಾಗಿದೆ.
ಇವರು ಹೆಬ್ರಿ ತಾಲೂಕಿ ಅಲ್ದಾಡಿ ಗ್ರಾಮದಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದು ಅಲ್ಲಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ.5 ಅಡಿ 3 ಇಂಚು ಎತ್ತರ, ಸಪೂರ ಸದೃಢಕಾಯದ ಮೈ ಕಟ್ಟು, ಬಿಳಿಯ ಗೋಧಿ ಮೈ ಬಣ್ಣ ಹೊಂದಿದ್ದು, ಇಂಗ್ಲೀಷ್ ಹಾಗೂ ಮಲಯಾಳಿ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣಾ ದೂ.ಸ: 08259-280299, .ಮೋ.ನ: 9480805456, ಅಥವಾ 8277988963, ಕುಂದಾಪುರ ವೃತ್ತ ಪೊಲೀಸ್ ನಿರೀಕ್ಷಕರ ದೂ.ಸಂ: 08254-230880 ಅಥವಾ ಉಡುಪಿ ಕಂಟ್ರೋಲ್ರೂಂ ದೂ.ಸಂ: 0820-2526444 ಅನ್ನು ಸಂಪರ್ಕಿಸಬಹುದು ಎಂದು ಶಂಕರನಾರಾಯಣ ಪೊಲೀನ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.