- Advertisement -
- Advertisement -




ಮೊಗರ್ನಾಡು ಸಾವಿರ ಸೀಮೆ ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರಯಾಗದ ಉಗ್ರಾಣ ಮುಹೂರ್ತ ಇಂದು ವಿಧ್ವನ್ ಅನಂತರಾಮ್ ಐತಲ್ರವರು ನೆರವೇರಿಸಿದರು.
ಅತೀ ಮಹಾರುದ್ರಯಾಗ ನಡೆಯಲಿದ್ದು, ಆ ಪ್ರಯುಕ್ತ ರುದ್ರಪಾರಾಯಣ ನಡೆಯಿತು. ಇಂದಿನ ಕಾರ್ಯಕ್ರಮವನ್ನು ಆಡಳಿತ ಅಧಿಕಾರಿ ಜಯಪ್ರಕಾಶ್ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ದಿವಿನಾಯಕ ಮಹಿಳಾ ಭಜನಾ ಮಂಡಳಿ ತುಳಸಿವನ, ಅಯ್ಯಪ್ಪ ಭಕ್ತ ಮಂಡಳಿ ನಿಟಿಲಾಪುರ, ಪರಮೇಶ್ವರಿ ಅಮ್ಮ ಬಸ್ತಿಕಟ್ಟೆ, ಶ್ರೀ ಕೃಷ್ಣ ಭಜನಾ ಮಂಡಳಿ ಪಣೋಲಿಬೈಲ್, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
- Advertisement -