Friday, April 26, 2024
spot_imgspot_img
spot_imgspot_img

ಮಂಗಳೂರು: ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ಬೆಂಗಳೂರಿನ ಕಾರು ಚಾಲಕ ಸಾವು !

- Advertisement -G L Acharya panikkar
- Advertisement -

ಉಳ್ಳಾಲ: ಬೆಂಗಳೂರು ಮೂಲದ ಕ್ಯಾಬ್ ಚಾಲಕ ಯುವಕ ನೋರ್ವ ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ಸಮುದ್ರ ಪಾಲಾದ ಘಟನೆ ವರದಿಯಾಗಿದೆ. ಮೃತನನ್ನು ನಾಗರಾಜ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಸಮ್ಮರ್ ಸ್ಯಾಂಡ್ ಬೀಚ್ ಗೆ ಪ್ರವಾಸಿಗರನ್ನು ಕರೆದುಕೊಂಡು ಬಂದು, ಸಮುದ್ರದ ತೆರೆಗಳಲ್ಲಿ ಆಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ವಿಹಾರಕ್ಕೆಂದು ಇಂದು ಮಧ್ಯಾಹ್ನ ಉಳ್ಳಾಲಕ್ಕೆ ಈ ಪ್ರವಾಸಿಗರು ಆಗಮಿಸಿದ್ದರು ಎಂದು ವರದಿಯಾಗಿದೆ.ಸಮ್ಮರ್ ಸ್ಯಾಂಡ್ ನ ದೂರದ ಮೊಗವೀರಪಟ್ಟಣ ಬೀಚ್ ಪ್ರದೇಶದಲ್ಲಿ ಸಾಮಾನ್ಯವಾಗಿ ಮೀನುಗಾರರು ಮತ್ತು ಸ್ಥಳೀಯ ಜೀವರಕ್ಷಕ ಈಜುಗಾರರು ಇರುತ್ತಾರೆ. ಆದರೆ ಇಂದು ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿ ಸ್ಥಳೀಯರು ಯಾರು ಇರದ್ದರಿಂದ ಸಮುದ್ರಪಾಲಾಗುತ್ತಿದ್ದ ನಾಗರಾಜ್ ರಕ್ಷಣೆ ಸಾಧ್ಯವಾಗದೆ ಆತ ಸಾವನ್ನಪ್ಪಿದ್ದಾನೆ.

- Advertisement -

Related news

error: Content is protected !!