Friday, June 27, 2025
spot_imgspot_img
spot_imgspot_img

ಉಳ್ಳಾಲ: ರೌಡಿ ಶೀಟರ್ ಸಮೀರ್ ಕೊಲೆ ಪ್ರಕರಣ; ಇಬ್ಬರು ಪೊಲೀಸ್‌ ವಶ..!

- Advertisement -
- Advertisement -

ಉಳ್ಳಾಲ: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಉಳ್ಳಾಲದ ನಟೋರಿಯಸ್ ರೌಡಿ ಕಡಪ್ಪರ ಸಮೀರ್ (34) ಎಂಬಾತನನ್ನು ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ತಂಡವೊಂದು ಭಾನುವಾರ ರಾತ್ರಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದೆ. ಇದರ ಹಿಂದೆ ಗೋಲ್ಡ್‌ ಮಾಫಿಯಾ ಶಂಕ ವ್ಯಕ್ತವಾಗಿದ್ದು , ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ ಸಮೀರ್ ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು ಈತನ ಚಲನವಲನಗಳ ಮೇಲೆ 4-5 ಮಂದಿ ದುಷ್ಕರ್ಮಿಗಳ ತಂಡ ಕಣ್ಣಿಟ್ಟಿತ್ತು. ಬಾನುವಾರ ರಾತ್ರಿ 10.15ರ ವೇಳೆಗೆ ಸಮೀರ್ ತನ್ನ ತಾಯಿ. ಪತ್ನಿ. ಮಕ್ಕಳ ಜತೆ ಕಾರಿನಲ್ಲಿ ಕಲ್ಲಾಪಿನ ಫಾಸ್ಟವುಡ್ ಸೆಂಟರ್‌ವೊಂದಕ್ಕೆ ಬಂದಿದ್ದಾರೆ.

ಈ ವೇಳೆ ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಅಪಾಯವನ್ನರಿತ ಸಮೀರ್ ತಪ್ಪಿಸಿಕೊಂಡು ರೈಲ್ವೆ ಹಳಿ ಕಡೆಗೆ ಒಡಿದ್ದಾನೆ. ಆದರೆ ದುಷ್ಕರ್ಮಿಗಳು ಬೆನ್ನಟ್ಟಿ ಸಮೀರ್‌ನನ್ನು ಕೊಲೆಗೈದಿದ್ದಾರೆ. ಪೊಲೀಸರು ಕೆಲಹೊತ್ತು ಹುಡುಕಾಡಿದ ಬಳಿಕ ಸಮೀರ್ ಮೃತದೇಹ ಸಿಕ್ಕಿದೆ. ಘಟನಾ ಸ್ಥಳಕ್ಕೆ ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ನಾಯಕ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರು ತಿಂಗಳ ಹಿಂದೆ ಉಪ್ಪಳದ ನಟೋರಿಯಸ್ ವ್ಯಕ್ತಿಯೊಬ್ಬ ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವೇಳೆ ಮಾಹಿತಿ ಪಡೆದು ಮಧ್ಯವರ್ತಿಯನ್ನು ಅಪಹರಿಸಿ ಕೋಟಿ ರೂ. ಮೌಲ್ಯದ ಚಿನ್ನವನ್ನು ಎಗರಿಸಿದ್ದ. ಇದೇ ವಿಚಾರದಲ್ಲಿ ಜೈಲಿನಲ್ಲಿ ಸಮೀರ್ ಮೇಲೆ ದಾಳಿಯೂ ನಡೆದಿತ್ತು. ಚಿನ್ನ ಎಗರಿಸಿದ ದ್ವೇಷದಲ್ಲೇ ಉಪ್ಪಳದ ಗ್ಯಾಂಗ್ ಸುಪಾರಿ ಕಿಲ್ಲರ್ ಗಳಿಂದ ಸಮೀರ್‌ನನ್ನು ಕೊಲೆಗೈದಿರುವ ಸಾಧ್ಯತೆಯಿದೆ ಎಂಬ ಅನುಮಾನಗಳು ದಟ್ಟವಾಗಿದೆ. ಮಷ್ಕರ್ಮಿಗಳು ಪರಾರಿಯಾದ ಕಾರು ಉಡುಪಿಯ ನೋಂದಣಿಯಲ್ಲಿತ್ತು ಎನ್ನುವುದನ್ನು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಸಮೀರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಶಯಾಸ್ಪದ ವ್ಯಕ್ತಿಗಳಾಗಿ ಗುರುತಿಸಿಕೊಂಡ ಟಾರ್ಗೆಟ್ ಇಲ್ಯಾಸ್ ಸಂಬಂಧಿಕ ಹಾಗೂ ಆತನ ಮಿತ್ರನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

- Advertisement -

Related news

error: Content is protected !!