Friday, May 3, 2024
spot_imgspot_img
spot_imgspot_img

ಮಂಗಳೂರು : ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ಬೇಷರತ್‌ ವಿಲೀನ*ಯಾವುದೇ ಹುದ್ದೆಯ ಅಪೇಕ್ಷೆ ಇಲ್ಲದೇ ಈ ಕ್ಷಣದಿಂದ ಬಿಜೆಪಿಗೆ ದುಡಿಯುತ್ತೇನೆ- ಅರುಣ್‌ ಕುಮಾರ್‌ ಪುತ್ತಿಲ

- Advertisement -G L Acharya panikkar
- Advertisement -

ಮಂಗಳೂರು : ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ಬೇಷರತ್‌ ಸೇರ್ಪಡೆಗೊಂಡಿದೆ. ನಾನು ಯಾವುದೇ ಹುದ್ದೆಯ ಅಪೇಕ್ಷೆ ಇಲ್ಲದೇ ಈ ಕ್ಷಣದಿಂದ ಬಿಜೆಪಿಗೆ ದುಡಿಯುತ್ತೇನೆ. ಕಳೆದ ಮೂವತ್ತು ವರ್ಷದಿಂದ ಸಂಘಟನೆ ಮತ್ತು ಪಕ್ಷದಲ್ಲಿ ಯಾವುದೇ ಹುದ್ದೆಯಿಲ್ಲದೆ ದುಡಿದಿದ್ದೇನೆ , ಪುತ್ತಿಲ ಪರಿವಾರವನ್ನು ಬಿಜೆಪಿಯೊಂದಿಗೆ ವಿಲೀನ ಮಾಡಿದ್ದೇನೆ. ಮೋದಿಯವರಿಗೋಸ್ಕರ ಈ ಕ್ಷಣದಿಂದ ಬಿಜೆಪಿಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಹಾಗೂ ಕಾರ್ಯಕರ್ತರಿಂದ ಏನಾದರೂ ತಪ್ಪು ಬರಹಗಳು ಅಥವಾ ತಪ್ಪು ನಡತೆ ಆಗಿದ್ದರೆ ಅವರ ಪರವಾಗಿ ಕ್ಷಮೆ ಕೇಳುತ್ತೇನೆ ಎಂದು ಅರುಣ್‌ ಕುಮಾರ್‌ ಪುತ್ತಿಲ ಹೇಳಿದರು.

ಈ ಸಂದರ್ಭದಲ್ಲಿ ಭಾ.ಜ.ಪಾ. ಜಿಲ್ಲಾಧ್ಯಕ್ಷರಾದ ಸತೀಶ್‌ ಕುಂಪಲ, ವಿಭಾಗ ಸಹ ಪ್ರಭಾರಿ ಗೋಪಾಲ, ಕೃಷ್ಣ ಹೇರಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್ ಬೊಟ್ಯಾಡಿ, ಪ್ರೇಮಾನಂದ ಶೆಟ್ಟಿ , ಜಿಲ್ಲಾ ಚುನಾವಣಾ ನಿರ್ವಹಣಾ ಸಂಚಾಲಕರಾದ ನಿತಿನ್‌ ಕುಮಾರ್‌, ನಿಕಟ ಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ , ಜಿಲ್ಲಾ ಯುವಮೋರ್ಚ ಅಧ್ಯಕ್ಷ ನಂದನ್‌ ಮಲ್ಯ, ಪುತ್ತೂರು ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ನಗರಾಧ್ಯಕ್ಷ ಜಗನ್ನಿವಾಸ್‌ರಾವ್‌, ಅರುಣ್‌ ಕುಮಾರ್‌ ಪುತ್ತಿಲ, ಪ್ರಸನ್ನ ಮಾರ್ತ, ಅನಿಲ್‌ ತೆಂಕಿಲ, ಪ್ರವೀಣ್‌ ಶೆಟ್ಟಿ ತಿಂಗಳಾಡಿ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು

- Advertisement -

Related news

error: Content is protected !!