Monday, May 20, 2024
spot_imgspot_img
spot_imgspot_img

ಉಪ್ಪಳ: ಮನೆಯಿಂದ ಹೊರ ಹೋದ ವ್ಯಕ್ತಿ ವಾಪಸ್ಸಾಗದೆ ನಾಪತ್ತೆ..!

- Advertisement -G L Acharya panikkar
- Advertisement -

ಉಪ್ಪಳ: ಮನೆಯಿಂದ ಹೊರ ಹೋದ ವ್ಯಕ್ತಿಯೋರ್ವರು ಮನೆಗೆ ವಾಪಸ್ಸಾಗದೆ ನಾಪತ್ತೆಯಾದ ಘಟನೆ ಕುಂಬಳೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಲ್ಪಾಡಿ ಪ್ರತಾಪನಗರ ನಿವಾಸಿ ರಾಮ ಶೆಟ್ಟಿಗಾರ್ [62) ನಾಪತ್ತೆಯಾದ ವ್ಯಕ್ತಿ. ರಾಮ ಶೆಟ್ಟಿಗಾರ್ ಶಿಲಾನ್ಯಾಸ ನಡೆಸುತ್ತಿರುವ ಇವರು ಅಯೋಧ್ಯೆ ಕರಸೇವಕ, ಹಿರಿಯ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದವರು.

ಮೇ 3 ರಂದು ಬೆಳಗ್ಗೆ 11 ಗಂಟೆಗೆ ರಾಮ ಶೆಟ್ಟಿಗಾರ್ ತನ್ನ ಮೊಬೈಲನ್ನು ಮನೆಯಲ್ಲೇ ಬಿಟ್ಟು, ಉಟ್ಟ ಬಟ್ಟೆಯಲ್ಲೇ ಮನೆಯಿಂದ ತೆರಳಿರುವ ಇವರು ಮನೆಗೆ ವಾಪಾಸ್ಸಾಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮನೆಯವರು ಸಂಬಂಧಿಕರ ಸಹಿತ ಎಲ್ಲಾ ಕಡೆ ಹುಡುಕಾಡಿದರೂ, ಎಲ್ಲಿಯೂ ಪತ್ತೆಯಾಗಲಿಲ್ಲ. ಈ ಬಗ್ಗೆ ಮನೆಯವರು ಕುಂಬಳೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈ ವ್ಯಕ್ತಿ ಎಲ್ಲಿಯಾದರು ಕಂಡುಬಂದಲ್ಲಿ ಈ ನಂಬರ್‌ಗೆ ಕರೆಮಾಡುವಂತೆ ಮನೆಯವರು ತಿಳಿಸಿದ್ದಾರೆ. ಮೊ: 9847848277, 8281652432

- Advertisement -

Related news

error: Content is protected !!