- Advertisement -
- Advertisement -
ಉಪ್ಪಿನಂಗಡಿ: ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪಲ್ಲತ್ತಾರು ಬಳಿ ನಡೆದಿದೆ.
ಉಪ್ಪಿನಂಗಡಿ ಪೆರ್ನೆ ನಿವಾಸಿ ಯುವಕ ಸಿದ್ದೀಕ್ (29) ಮೃತರು. ಸಿದ್ದೀಕ್ ಆರೋಗ್ಯವಾಗಿಯೇ ಇದ್ದು, ಪಲ್ಲತ್ತಾರಿನಲ್ಲಿ ಕೆಲಸದಲ್ಲಿದ್ದರು. ಆದರೆ ರಾತ್ರಿ ಮಲಗಿದವರು ಬೆಳಿಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಸಿದ್ದೀಕ್ ಎಸ್ ಎಸ್ ಎಫ್ ನ ಸಕ್ರಿಯ ಕಾರ್ಯಕರ್ತರಾಗಿದ್ದರು ಎನ್ನಲಾಗಿದೆ.
- Advertisement -