- Advertisement -
- Advertisement -
ಆಸ್ತಿ ವಿಚಾರಕ್ಕೆ ಮಗ ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ನಡೆದ ಘಟನೆ ಮಂಡ್ಯದ ಸುಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ನಂಜಪ್ಪ (65) ಮಗ ಮಹದೇವ ಎಂದು ಗುರುತಿಸಲಾಗಿದೆ.
ಈತ ಮಗಳ ಹೆಸರಿಗೆ ಅಪ್ಪ ಆಸ್ತಿ ಬರೆದುಕೊಟ್ಟಿದ್ದಕ್ಕೆ ತಂದೆ ನಂಜಪ್ಪನನ್ನು ಕೊಂದಿದ್ದಾನೆ. ಆಸ್ತಿ ಕೊಡಲಿಲ್ಲವೆಂದು ಆಕ್ರೋಶಗೊಂಡಿದ್ದ ಮಗ. ರಸ್ತೆಯಲ್ಲಿ ಅಟ್ಟಾಸಿಕೊಂಡು ಹೋಗಿ ಹತ್ಯೆ ಮಾಡಿದ್ದಾನೆ. ಈ ವೇಳೆ ಅಡ್ಡ ಬಂದ ತಾಯಿ ಮಹದೇವಮ್ಮಳಿಗೆ ಗಾಯವಾಗಿದೆ.ಹತ್ಯೆ ಬಳಿಕ ಮಗ ಮಹದೇವ ಪರಾರಿಯಾಗಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
- Advertisement -