Monday, June 30, 2025
spot_imgspot_img
spot_imgspot_img

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

- Advertisement -
- Advertisement -

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2020-21ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಯು ನಡೆಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಮಯೂರ್ ಬಿ.ಜಿ ಆಯ್ಕೆಯಾದರು.

ಇವರು ಬಲ್ನಾಡಿನ ಬಂಗಾರಡ್ಕದ ಬಿ.ಎಸ್. ಗಂಗಾಧರ್ ಮತ್ತು ಕೆ.ಡಿ.ಗಾಯತ್ರಿ ದಂಪತಿಗಳ ಪುತ್ರ. ದ್ವಿತೀಯ ವಿಜ್ಞಾನ ವಿಭಾಗದ ಕ್ಷಿತೀಜ್ ಎಚ್. ಎಸ್ ಸಂಘದ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಇವರು ನೆಹರೂನಗರದ ಹರಿಪ್ರಸಾದ್ ಡಿ. ಎಸ್ ಮತ್ತು ಸುಚಿತಾ ಪಿ. ಎಂ ರವರ ಪುತ್ರ. ಜತೆ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಶ್ರೇಯಾ ಪಿ ಆಯ್ಕೆಯಾದರು. ಇವರು ಬಂಟ್ವಾಳ ತಾಲೂಕಿನ ಕುಳಾದ ದಿ. ನಾರಾಯಣ ಪೂಜಾರಿ ಮತ್ತು ಪುಷ್ಪ ದಂಪತಿಗಳ ಪುತ್ರಿ.

ಕ್ರೀಡಾ ಸಂಘದ ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಜೀವನ್ ಸಿ.ಕೆ ಅವರು ಆಯ್ಕೆಯಾಗಿದ್ದಾರೆ. ಇವರು ಮೈಸೂರಿನ ಕೆ.ಆರ್ ನಗರದ ಕೃಷ್ಣ ಸಿ.ಟಿ ಮತ್ತು ಪ್ರೇಮ ದಂಪತಿಗಳ ಪುತ್ರ. ಕ್ರೀಡಾ ಜತೆಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಐಶ್ವರ್ಯ ಎಮ್. ವೈ ಆಯ್ಕೆಯಾದರು. ಇವರು ಕೊಡಗಿನ ಸೋಮವಾರಪೇಟೆಯ ಯೋಗಾನಂದ ಎಂ. ಡಿ. ಮತ್ತು ಶಶಿಕಲಾ ದಂಪತಿಗಳ ಪುತ್ರಿ.

ವಿದ್ಯಾರ್ಥಿ ಕ್ಷೇಮಪಾಲಕರಾದ ವಿಶ್ವನಾಥ್ ಕೆ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.ಕ್ರೀಡಾ ಸಂಘದ ಚುನಾವಣೆಯನ್ನು ದೈಹಿಕ ಶಿಕ್ಷಣ ನಿದೇರ್ಶಕರಾದ ಡಾ. ಜ್ಯೋತಿಕುಮಾರಿ ಅವರು ನಡೆಸಿಕೊಟ್ಟರು. ಪ್ರಾಂಶುಪಾಲರಾದ ಮಹೇಶ ನಿಟಿಲಾಪುರ ವಿದ್ಯಾರ್ಥಿ ಸಂಘದ ನಾಯಕರನ್ನು ಅಭಿನಂದಿಸಿದರು.

- Advertisement -

Related news

error: Content is protected !!