Thursday, March 28, 2024
spot_imgspot_img
spot_imgspot_img

ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ವಿಶೇಷ ಪ್ರಾರ್ಥನೆ.

- Advertisement -G L Acharya panikkar
- Advertisement -

ಮಂಗಳೂರು : ಇಂದು 13-09-2020 ರ ಬೆಳಿಗ್ಗೆ 6 ಗ್ರಹಗಳು ಅವರವರ ಸ್ವಕ್ಷೇತ್ರ ದಲ್ಲಿ ಇರುತ್ತಾರೆ. ಇದೊಂದು ಒಳ್ಳೆಯ ಮುಹೂರ್ತ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ, ಭಾನುವಾರದ ದಿನ ಗ್ರಹ ಮಂಡಲದಲ್ಲಿ ಅಪರೂಪದಲ್ಲೇ ಅಪರೂಪದ ವಿದ್ಯಮಾನವನ್ನು ನಾವೆಲ್ಲರೂ ಕಾಣಬಹುದಾಗಿದೆ.

ಅಂದು ಛಾಯಾಗ್ರಹಗಳಾದ ರಾಹು-ಕೇತುಗಳನ್ನು ಹೊರತುಪಡಿಸಿ, ಮಿಕ್ಕ ಏಳು ಗ್ರಹಗಳಲ್ಲಿ ಆರು ಗ್ರಹಗಳು ತಮ್ಮ ತಮ್ಮ ಸ್ವಕ್ಷೇತ್ರಗಳಲ್ಲಿ ಇರುವುದು ಅತ್ಯಂತ ವಿಶೇಷವು. ಗುರುವು (ಪೂರ್ವಾಷಾಢ) ಧನಸ್ಸು ರಾಶಿಯಲ್ಲಿ, ಶನಿಯು(ಉತ್ತರಾಷಾಢ) ಮಕರದಲ್ಲಿ, ಕುಜನು(ಅಶ್ವಿನಿ) ಮೇಷದಲ್ಲಿ, ಚಂದ್ರನು ಕಟಕದಲ್ಲಿ ಶುಕ್ರನೊಂದಿಗೆ(ಪುನರ್ವಸು ನಕ್ಷತ್ರದಲ್ಲಿ), ರವಿಯು ಸಿಂಹದಲ್ಲಿ(ಉತ್ತರಾ ನಕ್ಷತ್ರ), ಬುಧನು ಉಚ್ಛ ಕ್ಷೇತ್ರವು, ಸ್ವಕ್ಷೇತ್ರವೂ ಆದ ಕನ್ಯಾರಾಶಿಯಲ್ಲಿ(ಹಸ್ತಾ ನಕ್ಷತ್ರ) ಇರುವುದು ವಿಶೇಷವೂ, ಅಪರೂಪವೂ ಆಗಿದೆ.


ವಾರ ಗ್ರಹರಾಜನಾದ ರವಿಯು ವಾರ. ಈ ಸಂದರ್ಭದಲ್ಲಿ ಬೆಳಿಗ್ಗೆ 11ರ ಸಮಯಕ್ಕೆ ವೃಶ್ಚಿಕ ಲಗ್ನ(10-45ರಿಂದ12-45ರ ವರೆಗೆ) ಇರುವುದು. ಆ ಲಗ್ನಕ್ಕೆ ಹೊಂದಿಕೊಂಡಂತೆ, ಗುರುವು ಧನಸ್ಥಾನವಾದ 2ನೇ ಮನೆಯಲ್ಲಿ, ಶನಿಯು 3ರಲ್ಲಿ, ಕುಜನು 6ರಲ್ಲಿ, ಚಂದ್ರನು (ಶುಕ್ರನೊಂದಿಗೆ)9ರಲ್ಲಿ, ರವಿಯು 10ರಲ್ಲಿ, ಬುಧನು 11ರಲ್ಲಿ ಇರುತ್ತಾರೆ. ಇದು ಅತ್ಯಂತ ಸುಸಮಯ. ಅಂದು ಸುಮಾರು ಬೆಳಿಗ್ಗೆ 10-45ರಿಂದ 12-45ರ ವರೆಗೂ ವೃಶ್ಚಿಕ ಲಗ್ನ ಇರುವುದು. ಈ ಸಮಯದಲ್ಲಿ ಯಾರು ಯಾವುದೇ ಸತ್ಕಾರ್ಯ, ಜಪ,ಹೋಮ,ತಪ, ದಾನ, ಗೋ ಸೇವೆ, ದೀನ ಜನೋಪಚಾರ, ಮಂತ್ರ ಪಾರಾಯಣ, ಸಹಸ್ರನಾಮದಿ ಪಾರಾಯಣಗಳು, ಪ್ರಾಣಿ-ಪಕ್ಷಿಗಳಿಗೆ ಆಹಾರ ಕೊಡವುದು, ಸತ್ಪಾತ್ರರಿಗೆ ದಾನ, ಮಹಾಲಯ ಪಕ್ಷದ ತನ್ನಿಮಿತ್ತ ಕಾರ್ಯ ಇತ್ಯಾದಿ ಸತ್ಕಾರ್ಯ ಮಾಡುವುದು ಶ್ರೇಯಸ್ಕರ.

ಆದುದರಿಂದ ಲೋಕ ಕಲ್ಯಾಣಾರ್ಥವಾಗಿ ಇಡೀ ಪ್ರಪಂಚಕ್ಕೆ ತಗಲಿದ ಈ ಮಹಾಮಾರಿಯು ಶೀಘ್ರವಾಗಿ ತೊಲಗಲಿ , ಶ್ರೀ ದೇವಳಗಳಲ್ಲಿ ನಡೆಯುವ ಎಲ್ಲಾ ಪೂಜಾ ಕೈ೦ಕರ್ಯಗಳು ಹಿಂದಿನಂತೆ ಸುಸೂತ್ರವಾಗಿ ನಡೆಯಲಿ , ಜನರ ಕಷ್ಟಗಳು ಬೇಗನೆ ನಿವಾರಣೆ ಯಾಗಲಿ ಎಂಬ ಹಿತ ದ್ರಷ್ಟಿಯಿಂದ ಶ್ರೀ ದೇವಳದಲ್ಲಿ 11:30 ಕ್ಕೆ ಸರಿಯಾಗಿ ದೇವಳದ ಆಡಳಿತ ಮಂಡಳಿ , ವೈದಿಕ ರು ಹಾಗೂ ಸಮಾಜ ಬಾಂಧವರು ಎಲ್ಲರೊಡಗೂಡಿ ಶ್ರೀ ವೀರ ವೆಂಕಟೇಶ್ ದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಕೆ . ಪಿ . ಪ್ರಶಾಂತ್ ರಾವ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು .

- Advertisement -

Related news

error: Content is protected !!