Wednesday, May 1, 2024
spot_imgspot_img
spot_imgspot_img

ಮನೆಯ ಮೇಲ್ಛಾವಣಿ ಹಾರಿ ಹೋಗಿ 5 ತಿಂಗಳ ಹಸುಳೆ ಮೃತ್ಯು!

- Advertisement -G L Acharya panikkar
- Advertisement -

ವಿಜಯಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಜೋರಾಗಿದೆ. ಬಿರುಗಾಳಿಗೆ ಮಗುವಿದ್ದ ಜೋಳಿಗೆ ಸಮೇತ ಮೇಲ್ಛಾವಣಿ ಹಾರಿ ಹೋಗಿ, ಹಸುಳೆ ಬಲಿಯಾದ ದುರ್ಘಟನೆ ವರದಿಯಾಗಿದೆ.

ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮದ ಅಬ್ದುಲ್ ರೆಹಮಾನ ಕಸಬ್ ಎಂಬವರ 5 ತಿಂಗಳ ಮಗು ಮುಸ್ಕಾನ್ ಮೃತ ದುರ್ದೈವಿ. ಮಗುವನ್ನು ಮನೆಯ ಮೇಲ್ಛಾವಣಿ ಕಂಬಿಗೆ ಕಟ್ಟಿದ್ದ ಜೋಳಿಗೆಯಲ್ಲಿ ಮಲಗಿಸಲಾಗಿತ್ತು.

ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಅಬ್ದುಲ್ ರೆಹಮಾನ್ ಕಸಾಬ ಹಾಗೂ ತಬಸುಮ್ ದಂಪತಿ ವಾಸವಿದ್ದ ಮನೆಯ ತಗಡಿನ ಹೊದಿಕೆಯ ಸೆಡ್ ಮೇಲ್ಛಾವಣಿ ಹಾರಿ ಹೋಗಿದೆ. ಈ ಸಂದರ್ಭದಲ್ಲಿ ಮೇಲ್ಛಾವಣಿ ಕಂಬಿಗೆ ಕಟ್ಟಿದ್ದ ಜೋಳಿಗೆಯಲ್ಲಿದ್ದ ಮಗು ಸಮೇತ ಸುಮಾರು‌ 50 ಅಡಿ ದೂರದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಡಿದು, ಶಾಟ್ ಸರ್ಕ್ಯೂ ಆಗಿ ಮೃತಪಟ್ಟಿದೆ. ಮಗುವನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Related news

error: Content is protected !!