ಪೊಳಲಿ: ವಾಚ್ಮ್ಯಾನ್ ವೃತ್ತಿಯ ಬಜಾಲ್ ಕಾವುಬೈಲ್ ನಿವಾಸಿ ನವೀನ್ ಗಟ್ಟಿಯವರ 7 ವರ್ಷದ ಮಗು ಮಾ|ತನಿಶ್ ಗಟ್ಟಿಯು H.L.H (Hemophagocytic Lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದು, ಮೂಳೆಯ ಅಸ್ತಿಮಜ್ಜೆ ಕಶಿ (ಬೊನ್ಮ್ಯಾರೋ ಟ್ರಾನ್ಸ್ಪ್ಲಾಂಟ್) ಚಿಕಿತ್ಸೆಯ ಸಹಾಯಕ್ಕಾಗಿ ಪೊಳಲಿ ರಾಜರಾಜೇಶ್ವರಿ ದೇವಾಲಯದ ದೃಢ ಕಲಶದ ಸಮಯ ಶ್ರೀ ಸನ್ನಿಧಿಯಲ್ಲಿ ನಮ್ಮ ತುಳುನಾಡ್ ಟ್ರಸ್ಟ್ (ರಿ)ಯ ಆಶಿಸಾ ನಿಧಿ ಯೋಜನೆಯ ವತಿಯಿಂದ ವಿಕ್ಕಿ ಶೆಟ್ಟಿ ಬೆದ್ರರವರು ಸತತ ಮೂರು ದಿನಗಳು ವಿಶೇಷ ವೇಷ ಧರಿಸಿ ಸಂಗ್ರಹಿಸಿದ 1ಲಕ್ಷ ರೂಪಾಯಿಯನ್ನು ಪೊಳಲಿ ರಾಜರಾಜೇಶ್ವರಿ ಅಮ್ಮನವರ ಸಮ್ಮುಖದಲ್ಲಿ ಮಗುವಿನ ಮನೆಯವರಿಗೆ ಹಸ್ತಾಂತರಿಸಲಾಯಿತು.
ವಿಕ್ಕಿ ಶೆಟ್ಟಿ ಬೆದ್ರ ಇವರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ ಹಿಂದೂ ಜಾಗರಣ ವೇದಿಕೆ ಶ್ರೀ ಸುದರ್ಶನ ಘಟಕ ಪೊಳಲಿ ಇದರ ಮುಖ್ಯಸ್ಥರು ಸಂತೋಷ್ ಶೆಟ್ಟಿ ಪೊಳಲಿ ಸುನಿಲ್ ಪೊಳಲಿ ಹಾಗೂ ಸಂಘದ ಸದಸ್ಯರು ಮತ್ತು ನಮ್ಮ ತುಳುನಾಡ್ ಟ್ರಸ್ಟ್ (ರಿ)ನ ಸ್ಥಾಪಕಾಧ್ಯಕ್ಷರಾದ ಜಿ.ವಿ.ಎಸ್ ಉಳ್ಳಾಲ್ ಹಾಗೂ ಅಧ್ಯಕ್ಷರಾದ ವಿದ್ಯಾಶ್ರೀ ಎಸ್ ಜೊತೆಗಿದ್ದರು.