Saturday, June 28, 2025
spot_imgspot_img
spot_imgspot_img

ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರ ಹಣದ ಆಮಿಷ ಮತ್ತು ಬಣ್ಣದ ಮಾತಿನಿಂದ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಯಾಗಿದೆ: ದಯಾನಂದ ಶೆಟ್ಟಿ ಉಜಿರೆಮಾರ್

- Advertisement -
- Advertisement -

ವಿಟ್ಲ ಮೂಡ್ನೂರು ಗ್ರಾಮ ಪಂಚಾಯಿತಿಗೆ ನಡೆದ ಉಪಚುನಾವಣೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರ ಹಣದ ಆಮಿಷ ಮತ್ತು ಬಣ್ಣ ಬಣ್ಣದ ಮಾತಿನಿಂದಾಗಿ ವಾರ್ಡ್‌ ನಲ್ಲಿ ಬಿಜೆಪಿ ಗೆ ಹಿನ್ನಡೆಯಾಗಿದೆ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ಪ್ರತಿಕ್ರಿಯಿಸಿದ್ದಾರೆ.

ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಜನರಲ್ಲಿ ಆಶಾಗೋಪುರವನ್ನು ಕಟ್ಟಿದ್ದಾರೆ ಮತದಾರರು ಕೂಡ ಅದನ್ನು ನಂಬಿದ್ದಾರೆ. ಮುಂದಿನ ದಿನಗಳಲ್ಲಿ ಮತದಾರರಿಗೆ ಭರವಸೆ ನೀಡಿದ ಎಲ್ಲಾ ಕೆಲಸವನ್ನು ಶಾಸಕರು ಆದಷ್ಟು ಬೇಗ ಮಾಡಲಿ ಎಂದು ಹೇಳಿದರು.ಚುನಾವಣೆಯ ದಿನದಂದು ವಿಪರೀತ ಮಳೆಯಿಂದಾಗಿ ಮತದಾನದ ಶೇಕಡವಾರು ಕಡಿಮೆಯಾಗಿರುವುದು ಕೂಡ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿನ್ನಡೆಗೆ ಕಾರಣವಾಯಿತು. ಚುನಾವಣೆ ನಡೆದ ವಾರ್ಡ್ ಹಿಂದಿನಿಂದಲೂ ಬಿಜೆಪಿಯ ಭದ್ರಕೋಟೆ ಇದು ನಮಗೆ ತಾತ್ಕಾಲಿಕ ಹಿನ್ನಡೆ ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರು ಎದೆಗುಂದದೆ ಸವಾಲಾಗಿ ಸ್ವೀಕರಿಸಿ ವಿಜಯವನ್ನು ಸಾದಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!