ವಿಟ್ಲ: ವಿಟ್ಲದ ಎಸ್ ಡಿ ಪಿ ಐ ಕಛೇರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಈ ಪ್ರಕರಣದಲ್ಲಿ ಅಕ್ಷಯ ರಜಪೂತ್ ಕಲ್ಲಡ್ಕ ಪ್ರಮುಖ ಆರೋಪಿ ಎಂದು ಕೇಸು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಉಜಿರೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ವಿರುದ್ಧ ಎಸ್ ಡಿ ಪಿ ಐ ಬಂಟ್ವಾಳ ಉಜಿರೆ ಭಾಗದ ಕಾರ್ಯಾಲಯಕ್ಕೆ ಬೆಂಕಿ ಯಾಕೆ ಕೊಡಬಾರದು ಎಂಬ ಸಂದೇಶವನ್ನು ಹರಿ ಬಿಟ್ಟು ಪ್ರಚೋದನೆ ನೀಡಿದ ಹಿನ್ನಲೆಯಲ್ಲಿ ಅಕ್ಷಯ ರಜಪೂತ್ ಕಲ್ಲಡ್ಕ ಮತ್ತು ಇತರರ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ಫೇಸ್ಬುಕ್ ಖಾತೆಯಲ್ಲಿ ನೀಡಿರುವ ಹೇಳಿಕೆಯನ್ನು ಆಧರಿಸಿ ಅಕ್ಷಯ ರಜಪೂತ್ ವಿರುದ್ಧ ಕೇಸು ದಾಖಲು ಮಾಡಲಾಗಿದೆ.ಅಕ್ಷಯ್ ರಜಪೂತ್ ಕಲ್ಲಡ್ಕ ಭಜರಂಗದಳ ವಿಟ್ಲ ಪ್ರಖಂಡದ ಮಾಜಿ ಸಂಚಾಲಕರಾಗಿದ್ದು ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಎಸ್ ಡಿ ಪಿ ಐ ಕಛೇರಿ ಇರುವ ಕಟ್ಟಡಕ್ಕೆ ಬೆಂಕಿ ಇಟ್ಟು ಸುಟ್ಟು ಹಾಕುವ ಪ್ರಯತ್ನ ಮಾಡಲಾಗಿದೆ ಎಂದು ಅಬ್ದುಲ್ ರಹಿಮಾನ್ ನೀಡಿದ ದೂರಿನ ಅನ್ವಯ ಕೇಸು ದಾಖಲಾಗಿದೆ.