- Advertisement -
- Advertisement -
ವಿಟ್ಲ: ತ್ಯಾಗ, ಬಲಿದಾನ, ಸಮಾನತೆಯ ಸಂಕೇತವಾದ ಬಕ್ರೀದ್ ಹಬ್ಬ ಈ ಬಾರಿ ಸರಳ ರೀತಿಯಲ್ಲಿ ನಡೆಯುತ್ತಿದೆ. ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಹಬ್ಬವನ್ನು ಸಂಭ್ರಮಿಸಲಾಗುತ್ತಿದೆ. ಅಂತೆಯೇ ವಿಟ್ಲದ ಟೌನ್ ಮಸೀದಿಯಲ್ಲಿ ಸಾರ್ವಜನಿಕ ನಮಾಝ್ ಮಾಡಲಾಯಿತು.
ಪ್ರಸಕ್ತ 2021ನೇ ಸಾಲಿನ ಬಕ್ರೀದ್ ಆಚರಣೆ, ಪ್ರಾಣಿ ವಧೆ ಮತ್ತು ಬಲಿದಾನ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರಕಾರ ಹೊರಡಿಸಿರುವ ಆದೇಶದ ಪ್ರಕಾರ ಜಿಲ್ಲೆಗೆ ಸಂಬಂಧಿಸಿದಂತೆ ಆಯಾ ಮಸೀದಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ.50 ಮಂದಿ ಮೀರದಂತೆ ಪ್ರಾರ್ಥನೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದರು.
- Advertisement -