Friday, May 10, 2024
spot_imgspot_img
spot_imgspot_img

ಕಾಸರಗೋಡು: ಮಾಡ ಪರಿಸರದಲ್ಲಿ ನಿಷೇಧಾಜ್ಞೆ ಜಾರಿ- ಜಿಲ್ಲಾಧಿಕಾರಿ ಆದೇಶ

- Advertisement -G L Acharya panikkar
- Advertisement -
vtv vitla

ಕಾಸರಗೋಡು: ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಜತ್ತೂರು ಮಾಡ ಪರಿಸರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಆದೇಶ ನೀಡಿದ್ದಾರೆ.

ಮಾಡ ದೇವಸ್ಥಾನ ಸಮೀಪದ ಸ್ಮಶಾನ ಸ್ಥಳ ಹಾಗೂ ರಸ್ತೆಗೆ ಸಂಬಂಧ ಪಟ್ಟಂತೆ ಅಹಿತಕರ ಘಟನೆಗೆ ಸಾಧ್ಯತೆ ಬಗ್ಗೆ ಲಭಿಸಿದ ವರದಿಯಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ.

ಮೇ 6 ಸಂಜೆ 7 ಗಂಟೆಯಿಂದ ಮೇ 8ರ ಸಂಜೆ 7 ಗಂಟೆ ತನಕ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ನಿಷೇಧಾಜ್ಞೆ ಹಿನ್ನಲೆಯಲ್ಲಿ ಕೋವಿ ಸೇರಿದಂತೆ ಮಾರಕಾಸ್ತ್ರ ಕೊಂಡೊಯ್ಯುವುದು, ಬಹಿರಂಗ ಘೋಷಣೆ ಕೂಗುವುದು, ಧ್ವನಿ ವರ್ಧಕ ಬಳಕೆ, ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಪ್ರತಿಭಟನೆ, ಮೆರವಣಿಗೆ, ಸಮಾವೇಶ ಗಳನ್ನು ನಿಷೇಧಿಸಲಾಗಿದೆ.

- Advertisement -

Related news

error: Content is protected !!