- Advertisement -
- Advertisement -
ವಿಟ್ಲ: ಒಡಿಯೂರು ಸಂಸ್ಥಾನಮ್ ಇದರ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಇವರ ಜನ್ಮ ಷಷ್ಠಬ್ದ ಇದರ ಅಂಗವಾಗಿ ರೋಟರಿ ಕ್ಲಬ್ ವಿಟ್ಲ, ಜೇಸಿಐ ವಿಟ್ಲ ಇದರ ಸಹಯೋಗದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರಿಂದ ರಕ್ತದಾನ ಶಿಬಿರ ಏಪ್ರಿಲ್ 11 ರಂದು ಪುಷ್ಪಕ್ ಹೆಲ್ತ್ ಸೆಂಟರ್ನಲ್ಲಿ ನಡೆಯಲಿದೆ.
ಉದ್ಘಾಟನೆಯನ್ನು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾಧ್ವಿ ಶ್ರೀ ಮಾತಾನಂದಮಯೀ, ಒಡಿಯೂರು ಸಂಸ್ಥಾನಮ್, ವೈದ್ಯಾಧಿಕಾರಿ ಡಾ. ವಿಕೆ ಹೆಗ್ಡೆ, ಒಡಿಯೂರು ಶ್ರೀಗಳವರ ಷಷ್ಠಬ್ದ ಸಂಭ್ರಮ ಸಮಿತಿ ಇದರ ಅಧ್ಯಕ್ಷ ಮೋನಪ್ಪ ಗೌಡ, ರೋಟರಿ ಕ್ಲಬ್ ವಿಟ್ಲ ಇದರ ಅಧ್ಯಕ್ಷ ರೋ. ಕೃಷ್ಣ ಭಟ್, ಜೇಸಿಐ ವಿಟ್ಲ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಉಪಸ್ಥಿತಿಯಿರಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -