- Advertisement -
- Advertisement -
ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಸಂತೆ ಮಾರುಕಟ್ಟೆ ಬಳಿ ಬಸ್ ತಂಗುದಾಣವನ್ನು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಈ ಪ್ರಯಾಣಿಕರ ತಂಗುದಾಣ ಸರಿಯಾಗಿಯೇ ಇತ್ತು.
ಆದರೆ ಹಲವು ದಿನಗಳ ಹಿಂದೆ ಪಿಕ್ ಅಪ್ ವಾಹನವೊಂದು ಇದಕ್ಕೆ ಡಿಕ್ಕಿ ಹೊಡೆದಿತ್ತು, ಡಿಕ್ಕಿ ಹೊಡೆದ ಪರಿಣಾಮ ಹಾಸಿದ ಛಾವಣಿ ಜಖಂಗೊಂಡು ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ತೊಂದರೆಯಾಗುತ್ತಿತ್ತು ಈ ಬಗ್ಗೆ ವಿ ಟಿವಿ ವರದಿಯನ್ನು ಪ್ರಕಟಿಸಿತ್ತು.
ಇದೀಗ ಮತ್ತೆ ಆಟೋ ರಿಕ್ಷಾ ಇದಕ್ಕೆ ಗುದ್ದಿದೆ. ಇದನ್ನು ಆದಷ್ಟು ಶೀಘ್ರ ದುರಸ್ತಿಗೊಳಿಸದಿದ್ದಲ್ಲಿ ಬೇರೆ ವಾಹನಗಳಿಗೆ ತೊಂದರೆಯುಂಟಾಗಬಹುದು. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕಾಗಿದೆ.
- Advertisement -