Friday, May 3, 2024
spot_imgspot_img
spot_imgspot_img

ವಿಟ್ಲ: ಚಂದಳಿಕೆ 25ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಬೆಳ್ಳಿ ಹಬ್ಬ ಕ್ರೀಡೋತ್ಸವ

- Advertisement -G L Acharya panikkar
- Advertisement -
This image has an empty alt attribute; its file name is Lakshmi-Ganesh-2-1024x683.jpg

ವಿಟ್ಲ: ಕಾರ್ತಿಕ್‌ ಫ್ರೆಂಡ್ಸ್‌ ಕ್ಲಬ್‌(ರಿ) ಚಂದಳಿಕೆ ವಿಟ್ಲ, ಸಾರ್ವಜನಿಕ ಗಣೇಶೋತ್ಸವ ಬೆಳ್ಳಿ ಹಬ್ಬ ಸಮಿತಿ ಚಂದಳಿಕೆ, ವಿಟ್ಲ ಇದರ 25ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಬೆಳ್ಳಿ ಹಬ್ಬ ಕ್ರೀಡೋತ್ಸವವು ಸೆ.03ರಂದು ಬೆಳಿಗ್ಗೆ 9.00ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ ವಿಟ್ಲದಲ್ಲಿ ನಡೆಯಲಿದೆ.

ಈ ವೇಳೆ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ ಬೆಳಗ್ಗೆ 9.00 ರಿಂದ ಸಂಜೆ 4.00ರವರೆಗೆ ಆಧಾರ್‌ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ ಹಾಗೂ ಅಂಚೆ ಇಲಾಖೆಯ ಜನೋಪಯೋಗಿ ಸೇವಾ ಸೌಲಭ್ಯಗಳು ದೊರೆಯಲಿದೆ.

ಬೆಳ್ಳಿಹಬ್ಬ ಕ್ರೀಡೋತ್ಸವ ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದುರು ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಸಾರ್ವಜನಿಕ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ಇದರ ಅಧ್ಯಕ್ಷ ಶಂಕರ ಭಟ್‌ ಬದನಾಜೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಟ್ಲ ಆರಕ್ಷಕ ಠಾಣೆಯ ನೀರಿಕ್ಷಕರು ನಾಗರಾಜ ಎಚ್‌.ಇ, ವಿದ್ಯಾವರ್ಧಕ ಸಂಘ ದ.ಕ.ಜಿ.ಪಂ ಶಾಲೆ ಚಂದಳಿಕೆ ವಿಟ್ಲ ಇದರ ಅಧ್ಯಕ್ಷರು ಭವಾನಿ ರೈ ಕೊಲ್ಯ, ದ.ಕ.ಜಿ.ಪಂ ಚಂದಳಿಕೆ ಶಾಲೆಯ ಮುಖ್ಯೋಪಾಧ್ಯಾಯರು ವಿಶ್ವನಾಥ ಗೌಡ ಕುಳಾಲು, ದ.ಕ.ಜಿ.ಪಂ ಚಂದಳಿಕೆ ಶಾಲೆಯ ದೈಹಿಕ ಶಿಕ್ಷಕರು ಸುರೇಶ್‌ ಶೆಟ್ಟಿ, ಚಂದಳಿಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಸುಮತಿ ದೇಜಪ್ಪ ಪೂಜಾರಿ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!